ADVERTISEMENT

ಬೇತಮಂಗಲ: ಸುಂದರಪಾಳ್ಯದ 5 ಕೆರೆಗಳ ಹರಾಜು

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 7:30 IST
Last Updated 15 ಜನವರಿ 2022, 7:30 IST
ಬೇತಮಂಗಲ ಸಮೀಪದ ಸುಂದರಪಾಳ್ಯ ಗ್ರಾ.ಪಂ.ನಲ್ಲಿ ಗುರುವಾರ ಕೆರೆಗಳ ಹರಾಜು ಪ್ರಕ್ರಿಯೆ ನಡೆಯಿತು
ಬೇತಮಂಗಲ ಸಮೀಪದ ಸುಂದರಪಾಳ್ಯ ಗ್ರಾ.ಪಂ.ನಲ್ಲಿ ಗುರುವಾರ ಕೆರೆಗಳ ಹರಾಜು ಪ್ರಕ್ರಿಯೆ ನಡೆಯಿತು   

ಬೇತಮಂಗಲ: ಸಮೀಪದ ಸುಂದರಪಾಳ್ಯ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ 5 ಕೆರೆ ಮತ್ತು ಕುಂಟೆಗಳ ಮೀನು ಪಾಳುವಾರು ಹಕ್ಕಿನ ಬಹಿರಂಗ ಹರಾಜು ನಡೆದಿದ್ದು, ಒಟ್ಟು ₹ 59 ಸಾವಿರ ಸಂಗ್ರಹವಾಗಿದೆ.

ಸುಂದರಪಾಳ್ಯ ಗ್ರಾ.ಪಂ. ವ್ಯಾಪ್ತಿಯ ನಾಗಿರೆಡ್ಡಿಕುಂಟೆ, ಕಲ್ಲಾವಿಹೊಸಹಳ್ಳಿ ಕೆರೆ, ಮಜರ ಕೃಷ್ಣಪುರ ಕೆರೆ, ಗೆನ್ನೇರಹಳ್ಳಿ ಕೆರೆ ಹಾಗೂ ಸುವರ್ಣಹಳ್ಳಿ ಕೆರೆಗಳನ್ನು ಅಧ್ಯಕ್ಷ ಎಸ್. ರಾಂಬಾಬು ಅವರ ಅಧ್ಯಕ್ಷತೆಯಲ್ಲಿ ಹರಾಜು ಮಾಡಲಾಯಿತು.

‘ಈ ಭಾಗದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿದಿವೆ. ಆದಕಾರಣ ಗ್ರಾ.ಪಂ. ವ್ಯಾಪ್ತಿಯ 1 ಕುಂಟೆ, 4 ಕೆರೆಗಳನ್ನು ಹರಾಜು ನಡೆಸಿದ್ದೇವೆ. 20ಕ್ಕೂ ಹೆಚ್ಚು ಬಿಡ್‍ದಾರರು ಪಾಲ್ಗೊಂಡಿದ್ದರು’ ಎಂದು ಪಿಡಿಒ ಏಜಾಜ್ ಪಾಷಾ ಮಾಹಿತಿ ನೀಡಿದರು.

ADVERTISEMENT

ಉಪಾಧ್ಯಕ್ಷೆ ರತ್ನಮ್ಮ ಅಮರಯ್ಯ, ಕಾರ್ಯದರ್ಶಿ ಚಂಗಲರಾಯಪ್ಪ, ಸದಸ್ಯರಾದ ಆರ್. ರಾಧಾಕೃಷ್ಣ, ಪ್ರಸಾದ್, ಮುನಿಸ್ವಾಮಿ ರೆಡ್ಡಿ, ಮುಖಂಡರಾದ ಸುವರ್ಣಹಳ್ಳಿ ಉದಯ್ ಕುಮಾರ್, ಗಿರೀಶ್, ಶ್ರೀನಿವಾಸ್ ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.