ADVERTISEMENT

ಮಾಲೂರು ಬಸ್ ನಿಲ್ದಾಣಕ್ಕೆ ಶಾಸಕ ಕೆ.ವೈ.ನಂಜೇಗೌಡ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:23 IST
Last Updated 19 ಸೆಪ್ಟೆಂಬರ್ 2025, 5:23 IST
ಮಾಲೂರು ಬಸ್ ನಿಲ್ದಾಣಕ್ಕೆ ಗುರುವಾರ ಶಾಸಕ ಕೆ.ವೈ.ನಂಜೇಗೌಡ ಭೇಟಿ ನೀಡಿ ಹಳೆ ಅಂಗಡಿ ಮಳಿಗೆಗಳ ಕಟ್ಟಡ ತೆರವು ಕಾರ್ಯವನ್ನು ವೀಕ್ಷಿಸಿದರು 
ಮಾಲೂರು ಬಸ್ ನಿಲ್ದಾಣಕ್ಕೆ ಗುರುವಾರ ಶಾಸಕ ಕೆ.ವೈ.ನಂಜೇಗೌಡ ಭೇಟಿ ನೀಡಿ ಹಳೆ ಅಂಗಡಿ ಮಳಿಗೆಗಳ ಕಟ್ಟಡ ತೆರವು ಕಾರ್ಯವನ್ನು ವೀಕ್ಷಿಸಿದರು    

ಮಾಲೂರು: ತಾಲ್ಲೂಕಿನಲ್ಲಿ ಅ.30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು ₹2,500 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಅದರಲ್ಲಿ ₹21 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹಾಗಾಗಿ ಸಿದ್ಧತೆ ನಡೆಯುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ನಗರದ ಬಸ್ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿ ಹಳೆ ಅಂಗಡಿ ಮಳಿಗೆಗಳ ಕಟ್ಟಡ ತೆರವು ಕಾರ್ಯ ವೀಕ್ಷಿಸಿ ಮಾತನಾಡಿದರು.

ಮುಖ್ಯಮಂತ್ರಿಗಳು ಮಾಲೂರಿಗೆ ಬರುವ ಕಾರ್ಯಕ್ರಮ ಯಾವುದೇ ಕಾರಣಕ್ಕೂ ಮುಂದೂಡಲ್ಲ. ವಿರೋಧ ಪಕ್ಷದವರು ಏನೇ ಮಾತನಾಡಲಿ ಕಾರ್ಯಕ್ರಮ ನಡೆಯುತ್ತದೆ. ಪಕ್ಷದ ಕಾರ್ಯಕರ್ತರು ಧೈರ್ಯವಾಗಿರಿ ಎಂದರು.

ADVERTISEMENT

ಇಒ ಕೃಷ್ಣಪ್ಪ, ತಹಶೀಲ್ದಾರ್ ಎಂ.ವಿ.ರೂಪ, ನಗರ ಸಭಾಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯರಾದ ವೆಂಕಟೇಶ್, ಇಮ್ತಿಯಾಜ್, ಹನುಮಂತಪ್ಪ, ರತ್ನಮ್ಮ, ಕಸಾಪ ಅಧ್ಯಕ್ಷ ಹನುಮಂತಯ್ಯ, ಮುಖಂಡರಾದ ಹನುಮಂತರೆಡ್ಡಿ, ಲಕ್ಕೂರು ಬಾಬು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಇಲ್ಲಿನ ವಿರೋಧ ಪಕ್ಷದವರು ಭ್ರಮೆಯಲ್ಲಿದ್ದಾರೆ. ನ್ಯಾಯಾಧೀಶರು ಮೇಲ್ಮನವಿಗೆ ಅವಕಾಶ ನೀಡಿದ್ದಾರೆ. ಅದರ ಕೆಲಸ ನಡೆಯುತ್ತಿದೆ. ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಗಮನ ಹರಿಸಿದ್ದೇನೆ. ಮರು ಮತ ಏಣಿಕೆಯಲ್ಲಿ ನಾನು ಸೋತರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ.
ಕೆ.ವೈ.ನಂಜೇಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.