ಕೆಜಿಎಫ್: ರಾಬರ್ಟಸನ್ಪೇಟೆಯ ನಾಡ ಕಚೇರಿ ಬಳಿ ಇರುವ ಅಂಗಡಿಯ ಬಾಗಿಲನ್ನು ಬಲವಂತವಾಗಿ ತೆರೆದು ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ನಗರಸಭೆ ಸದಸ್ಯ ಜರ್ಮನ್ ಜೂಲಿಯಸ್ ವಿರುದ್ಧ ರಾಬರ್ಟಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಡ ಕಚೇರಿ ಬಳಿ ಇರುವ ಅಂಗಡಿಯನ್ನು ಆರ್ಪಿಐ ತನ್ನ ಪಕ್ಷದ ಕಾರ್ಯ ಚಟುವಟಿಕೆಗೆ ಬಳಸುತ್ತಿತ್ತು. ಅದರ ಉಸ್ತುವಾರಿಯನ್ನು ಅನ್ಬು ಎಂಬುವರು ನೋಡಿಕೊಳ್ಳುತ್ತಿದ್ದರು. ಅವರು ಮೃತಪಟ್ಟ ನಂತರ ಪಕ್ಷದ ಅಧ್ಯಕ್ಷ ಎಸ್. ರಾಜೇಂದ್ರನ್ ಅವರ ಸುಪರ್ದಿಯಲ್ಲಿತ್ತು.
ಬುಧವಾರ ಜರ್ಮನ್ ಜೂಲಿಯಸ್ ತನ್ನ ಬೆಂಬಲಿಗರೊಡನೆ ಆಗಮಿಸಿ ಅಂಗಡಿ ಬಾಗಿಲು ತೆಗೆದು ಅಂಗಡಿಯಲ್ಲಿದ್ದ ಸುಮಾರು ₹ 50 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಶಾಸಕರೂ ಆದ ಎಸ್. ರಾಜೇಂದ್ರನ್ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.