ಕೆಜಿಎಫ್: ಆಯುರ್ವೇದ ಮತ್ತು ಅಲೋಪತಿ ಪದ್ಧತಿಯನ್ನು ಮಿಶ್ರ ಮಾಡಿ ಶಸ್ತ್ರ ಚಿಕಿತ್ಸೆ ನಡೆಸುವ ಪ್ರಕ್ರಿಯೆಯನ್ನು ಅವೈಜ್ಞಾನಿಕವಾಗಿದ್ದು, ಈ ಸಂಬಂಧವಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
‘ಅಲೋಪತಿ ಮತ್ತು ಆಯುರ್ವೇದವನ್ನು ಮಿಶ್ರಣಗೊಳಿಸಿ, ಸ್ನಾತಕೋತ್ತರ ಪದವಿಯ ಆಯುರ್ವೇದ ಪದ್ಧತಿಯ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬಹುದು ಎಂಬ ಸುತ್ತೋಲೆ ವೈದ್ಯಕೀಯ ಕ್ಷೇತ್ರಕ್ಕೆ ಮಾರಕವಾಗಿದೆ’ ಎಂದರು.
ಪ್ರಧಾನಮಂತ್ರಿ ಅವರಿಗೆ ತಹಶೀಲ್ದಾರ್ ಕೆ.ಎನ್.ಸುಜಾತ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಸಂಘದ ಡಾ.ವಿಜಯಕುಮಾರ್, ಡಾ.ನಾಗಪ್ಪ, ಡಾ.ಮಂಜುನಾಥ್, ಡಾ.ಸತ್ಯಕುಮಾರ್, ಡಾ.ಮೈಥಿಲಿ, ಡಾ.ಸರಸ್ವತಿ, ಡಾ.ಮುರಳೀಧರ್, ಡಾ.ರತ್ನ, ಡಾ.ಸವಿತ ಪ್ರಭು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.