ADVERTISEMENT

ಎತ್ತಿನ ಹಗ್ಗಕ್ಕೆ ಸಿಲುಕಿ ಡಿವೈಎಸ್‌ಪಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 20:51 IST
Last Updated 13 ಫೆಬ್ರುವರಿ 2022, 20:51 IST

ಬಂಗಾರಪೇಟೆ: ತಾಲ್ಲೂಕಿನ ದೋಣಿಮೊಡಗು ಪಂಚಾಯಿತಿ ವ್ಯಾಪ್ತಿಯ ತನಿಮೊಡಗು ಗ್ರಾಮದ ಸಂಕ್ರಾಂತಿ (ರಾಸುಗಳಿಗೆ ಕಿಚ್ಚು ಹಾಯಿಸುವ) ಹಬ್ಬದಂದು ಪೊಲೀಸ್ ಬಂದೋಬಸ್ತ್ ವೀಕ್ಷಣೆಗೆ ಅಲ್ಲಿಗೆ ತೆರಳಿದ್ದ ಡಿವೈಎಸ್ಪಿ ಮುರಳೀಧರ ಅವರ ಕಾಲು ಎತ್ತಿನ ಹಗ್ಗಕ್ಕೆ ಸಿಲುಕಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಎತ್ತಿನ ಹಗ್ಗ ಸುತ್ತಿಕೊಂಡು ಕೆಳಗೆ ಬಿದ್ದ ಡಿವೈಎಸ್ಪಿ ಅವರಿಗೆ ಸ್ವಲ್ಪಹೊತ್ತು ಪ್ರಜ್ಞೆ ತಪ್ಪಿತ್ತು. ಕೂಡಲೆ ಅವರನ್ನು ಆಂಧ್ರಪ್ರದೇಶದ ಪಿಇಎಸ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಂಕ್ರಾಂತಿ ಹಬ್ಬ ಆಚರಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ತನಿಮೊಡುಗು ಗ್ರಾಮಸ್ಥರು ಕಾಮಸಮುದ್ರ ಠಾಣೆಗೆ ಮನವಿ ಸಲ್ಲಿಸಿದ್ದರು. ರಾಸುಗಳಿಗೆ ಪೂಜೆ ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದ ಪೊಲೀಸರು ಎತ್ತುಗಳ ಓಟಕ್ಕೆ ಅವಕಾಶ ಕೊಟ್ಟಿರಲಿಲ್ಲ. ಜಲ್ಲಿಕಟ್ಟು ನಡೆಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪೋಸ್ಟ್ ಮಾಡಿದ್ದು, ಮುನ್ನೆಚ್ಚರಿಕೆಯಾಗಿ ಭಾನುವಾರ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.