ಕೆಜಿಎಫ್: ಆಂಧ್ರ ಪ್ರದೇಶದಿಂದ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ನಾಲ್ಕು ಟ್ಯಾಂಕರ್ಗಳನ್ನು ಆಂಧ್ರದ ಗಡಿ ಭಾಗವಾದ ಪಂತನಹಳ್ಳಿಯಲ್ಲಿ ಅಬಕಾರಿ ಸಿಬ್ಬಂದಿ ಬುಧವಾರ ವಶಕ್ಕೆ ತೆಗೆದುಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಶಾಂತ್, ಪ್ರಕಾಶ್ ನಾಯಕ್, ಇಮ್ರಾನ್, ಮಣಿಕಂಠ ಅವರನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಅಬಕಾರಿ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ನಾಲ್ಕು ಟ್ಯಾಂಕರ್ಗಳನ್ನು ಪತ್ತೆಹಚ್ಚಿದರು. ಅದರಲ್ಲಿ 1.40 ಲಕ್ಷ ಲೀಟರ್ ಮದ್ಯಸಾರ ಸಂಗ್ರಹವಿತ್ತು ಎಂದು ಅಬಕಾರಿ ಉಪ ಆಯುಕ್ತ ರವಿಶಂಕರ್ ತಿಳಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ಅಧಿಕಾರಿಗಳಾದ ನರಸಿಂಹಮೂರ್ತಿ, ಶಶಿಕಲಾ, ಆಶಾರಾಣಿ, ಎಂ.ಆರ್.ಶಿವಶಂಕರ್, ಪುಷ್ಪಾ, ಗಿರೀಶ್ ಬಾಬು, ಅಂಬಾಸಾ ಪವಾರ್, ಹಣಮಂತ ವಾಗ್ಮೋರೆ, ನರಸಿಂಹಮೂರ್ತಿ, ಅಶೋಕ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.