ಮಾಲೂರು: ಪ್ರಸ್ತುತ ಸಮಾಜದಲ್ಲಿ ತಂತ್ರಜ್ಞಾನ ಉನ್ನತಮಟ್ಟದಲ್ಲಿದ್ದರೂ ಅನರಕ್ಷತೆ, ಅಜ್ಞಾನ ಕಾಡುತ್ತಿರುವುದು ಪ್ರತಿಯೊಬ್ಬರೂ ತಲೆತಗ್ಗಿಸುವ ಸಂಗತಿಯಾಗಿದೆ ಎಂದು ಜಿಲ್ಲಾ ಸಾಕ್ಷರತಾ ಸಂಯೋಜಕ ಡಿ.ಆರ್. ರಾಜಪ್ಪ ತಿಳಿಸಿದರು.
ಪಟ್ಟಣದ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಗುರುವಾರ ನಡೆದ ಕೊಳಚೆ ಮತ್ತು ನಗರದ ಸಾಕ್ಷರತಾ ಬೋಧಕರ 2ನೇ ಹಂತದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕೈಗಾರಿಕೆ ಮತ್ತು ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮಾನವ ಇಡೀ ವಿಶ್ವದಲ್ಲಿ ನಡೆಯುವ ವಿದ್ಯಮಾನಗಳನ್ನು ತನ್ನ ಅಂಗೈಯಲ್ಲಿ ನೋಡುವ ಕಾಲಘಟ್ಟದಲ್ಲಿ ಅನರಕ್ಷತೆ, ಅಜ್ಞಾನ ಕಾಣುತ್ತಿದೆ ಎಂದು ವಿಷಾದಿಸಿದರು.
ಸ್ವಯಂಸೇವಕರು ತರಬೇತಿ ನೀಡುತ್ತಿದ್ದು, ಆಯಾ ಭಾಗದ ಪುರಸಭಾ ಸದಸ್ಯರು ಸ್ವಯಂಸೇವಾ ಸಂಸ್ಥೆಗಳ ಮುಖಂಡರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಸದಸ್ಯ ಮಂಜುನಾಥ್, ಸುಮಿತ್ರಾ, ಶ್ರೀಸಾಯಿ ಕೃಪಾ ಕ್ಷೇಮಾಭಿವೃದ್ಧಿ ಫೌಂಡೇಶನ್ ಸಂಸ್ಥೆಯ ಭಾಗ್ಯಮ್ಮ, ಸಂಪನ್ಮೂಲ ವ್ಯಕ್ತಿ ಕೃಷ್ಣಪ್ಪ, ಸಂಯೋಜಕ ವೆಂಕಟಸ್ವಾಮಿ, ಪದ್ಮಾ, ಅನಿತಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.