ADVERTISEMENT

ಕೋಲಾರ | ಹತ್ಯೆ ಪ್ರಕರಣ; ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:53 IST
Last Updated 15 ಆಗಸ್ಟ್ 2025, 5:53 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕೋಲಾರ: ಮಾಲೂರು ತಾಲ್ಲೂಕಿನ ಕೊಮ್ಮನಹಳ್ಳಿಯ ಬಳಿ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಟೇಕಲ್‌ನ ರಾಕೇಶ್‌ ಎಂಬಾತನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಮಾಸ್ತಿ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಗೋವಿಂದರಾಜು ಬಂಧಿತ ಆರೋಪಿ. ಆತನ ಸಹಚರರ ಬಂಧನಕ್ಕೆ ಬಲೆ ಬೀಸಿ ಎರಡು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 

ಕಬಾಬ್‌ ವಿಚಾರವಾಗಿ ಜಗಳ ನಡೆದು ಹಲ್ಲೆ ನಡೆದಿತ್ತು. ರಾಕೇಶ್‌ ಮೃತಪಟ್ಟಿದ್ದರೆ ಕಾರ್ತಿಕ್‌ ಎಂಬುವರು ಗಾಯಗೊಂಡಿದ್ದರು. ಕಣಗಲ ಗ್ರಾಮದ ಗುಂಪು ಹಲ್ಲೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಯುವತಿಯನ್ನು ಚುಡಾಯಿಸಿದ ಕಣಗಲ ಗ್ರಾಮದ ವ್ಯಕ್ತಿಗಳಿಗೆ ಧಮ್ಕಿ ಹಾಕಿದ್ದೇ ಈ ಹಲ್ಲೆಗೆ ಕಾರಣ ಎನ್ನಲಾಗಿದೆ. ಆಗಿನಿಂದ ಸೇಡು ‌ತೀರಿಸಿಕೊಳ್ಳಲು ಕಾಯುತ್ತಿದ್ದರು ಎಂಬುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.