ADVERTISEMENT

ಕೆಜಿಎಫ್‌: ಶಾಲೆಗಳು ಮೊಬೈಲ್ ಸಂದೇಶ ‍ಪದ್ಧತಿ ಕೈಬಿಡಲು ಮನವಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 14:23 IST
Last Updated 28 ಏಪ್ರಿಲ್ 2024, 14:23 IST

ಕೆಜಿಎಫ್‌: ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಪೋಷಕರಿಗೆ ಮೊಬೈಲ್ ಮೂಲಕ ಸಂದೇಶ ಕಳಿಸುವ ಪದ್ಧತಿ  ಕೈಬಿಡಬೇಕು ಎಂದು ಮುಖಂಡ ಸೈಯದ್‌ ಅಲ್ಲಾಬಕಾಷ್‌ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ಪ್ರಮುಖವಾಗಿ ಖಾಸಗಿ ಶಾಲೆಗಳಲ್ಲಿ ಹೆಚ್ಚು ಹಣ ನೀಡಿ ಪೋಷಕರು ಮಕ್ಕಳನ್ನು ಓದಿಸುತ್ತಿದ್ದಾರೆ. ಶಾಲೆಗಳ ಸಂದೇಶ ಮೊಬೈಲ್ ಮೂಲಕ ಬರುತ್ತಿರುದರಿಂದ ಪೋಷಕರು ಕಡ್ಡಾಯವಾಗಿ ಸ್ಮಾರ್ಟ್‌ ಫೋನ್ ಖರೀದಿಸಬೇಕಾಗಿದೆ. ಶುಲ್ಕ ಜೊತೆಗೆ ಮೊಬೈಲ್ ಖರೀದಿ ಪೋಷಕರಿಗೆ ಹೊರೆಯಾಗುತ್ತಿದೆ. ಅಲ್ಲದೆ, ಮಕ್ಕಳು ಮೊಬೈಲ್‌ ಸಂದೇಶ ನೋಡುವ ನೆಪದಲ್ಲಿ ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ಅನಗತ್ಯ ಮತ್ತು ಆತಂಕಕಾರಿ ಮೆಸೇಜ್‌ಗಳು ರವಾನೆಯಾಗುತ್ತಿವೆ. ಪ್ರೀತಿ, ಪ್ರೇಮ ಎಂದು ಮಕ್ಕಳು ವಿದ್ಯಾಭ್ಯಾಸ ಹಾಳು ಮಾಡಿಕೊಳ್ಳುತ್ತಿದ್ದಾರೆ.  ಮೊಬೈಲ್‌ ಬಳಕೆಯನ್ನು ವಿದ್ಯಾರ್ಥಿಗಳಿಗೆ ತಪ್ಪಿಸಬೇಕು ಎಂದು ಕೋರಿದ್ದಾರೆ.

ವಿದ್ಯಾರ್ಥಿಗಳ ಮತ್ತು ಪೋಷಕರ ಹಿತದೃಷ್ಟಿಯಿಂದ ಮೊಬೈಲ್ ಬಳಕೆಯನ್ನು ಶಾಲೆಗಳು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.