ADVERTISEMENT

ಚಾಕುವಿನಿಂದ ತಿವಿದು ಸುಲಿಗೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 3:39 IST
Last Updated 23 ಜುಲೈ 2021, 3:39 IST

ಕೆಜಿಎಫ್‌: ನಗರದ ಎಂ.ಎಲ್‌. ಬ್ಲಾಕ್‌ ಬಳಿ ಸೈನೈಡ್ ಗುಡ್ಡ ವೀಕ್ಷಿಸುತ್ತಿದ್ದ ಇಬ್ಬರು ಯುವಕರ ಮೇಲೆ ಮೂವರು ಅಪರಿಚಿತರು ದಾಳಿ ನಡೆಸಿ ಅವರ ಬಳಿ ಇದ್ದ ಮೊಬೈಲ್ ಮತ್ತು ಚಿನ್ನದ ಒಡವೆಗಳನ್ನು ದೋಚಿದ್ದಾರೆ.

ಬೆಂಗಳೂರು ಮೂಲದ ದರ್ಶನ್‌ ಮತ್ತು ಕಾರ್ತಿಕ್ ಎಂಬುವರು ಸೈನೈಡ್ ಗುಡ್ಡದ ಮೇಲೆ ಏರಿ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಅಪರಿಚಿತರು ಅವರನ್ನು ಅಡ್ಡಗಟ್ಟಿದ್ದಾರೆ. ದರ್ಶನ್‌ ಅವರ ತೋರುಬೆರಳಿಗೆ ಚಾಕುವಿನಲ್ಲಿ ತಿವಿದಿದ್ದಾರೆ.

ನಂತರ ಅವರ ಬಳಿ ಇದ್ದ ಮೂರು ಮೊಬೈಲ್‌, ಚಿನ್ನ, ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ADVERTISEMENT

ಇವುಗಳ ಮೊತ್ತ ಸುಮಾರು ₹ 92 ಸಾವಿರ ಆಗಿದೆ. ಊರಿಗಾಂ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.