ADVERTISEMENT

ಶಿವಕುಮಾರ ಶ್ರೀ ಸೇವೆ ಅನನ್ಯ: ಶಿಕ್ಷಕ ಕೆ.ಜಿ. ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 6:58 IST
Last Updated 2 ಏಪ್ರಿಲ್ 2021, 6:58 IST
ಬಂಗಾರಪೇಟೆಯಲ್ಲಿ ಶಿವಕುಮಾರ ಸ್ವಾಮೀಜಿ ಜನ್ಮ ದಿನ ಆಚರಿಸಲಾಯಿತು
ಬಂಗಾರಪೇಟೆಯಲ್ಲಿ ಶಿವಕುಮಾರ ಸ್ವಾಮೀಜಿ ಜನ್ಮ ದಿನ ಆಚರಿಸಲಾಯಿತು   

ಬಂಗಾರಪೇಟೆ: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಸೇವೆ ಎಲ್ಲರಿಗೂ ಸ್ಫೂರ್ತಿ ಎಂದು ಶಿಕ್ಷಕ ಕೆ.ಜಿ. ಮಂಜುನಾಥ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಬಸವೇಶ್ವರ ಸ್ವಾಮಿ ದೇಗುಲದ ಮುಂದೆ ಶ್ರೀಮತಿ ಅಕ್ಕಚ್ಚಮ್ಮ ಶ್ರೀಬಿ.ಎಸ್. ನಂಜುಂಡಯ್ಯ ವೀರಶೈವ ಕಲ್ಯಾಣ ಮಂಟಪ ಟ್ರಸ್ಟ್ ಹಾಗೂ ವೀರಶೈವ ಸಮಾಜದಿಂದ ಏರ್ಪಡಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 114ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎ.ಎನ್. ಸದಾಶಿವಯ್ಯ, ಟ್ರಸ್ಟ್ ಅಧ್ಯಕ್ಷೆ ಶಾಂತ ಕುಮಾರಿ, ಸಮಾಜದ ಯುವ ಮುಖಂಡ ಮಹೇಶ್ ಅವರು ಶಿವಕುಮಾರ ಸ್ವಾಮೀಜಿ ಅವರ ಸೇವೆ, ದಾಸೋಹ ಕಾರ್ಯ ಸ್ಮರಿಸಿದರು. ಪ್ರದೀಪ್, ಸಂಗಮೇಶ, ಪ್ರಮೋದ್, ಗೋಟ್ಯಾಳ್, ಲೋಕೇಶ್, ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.