ADVERTISEMENT

ಮರು ಮೌಲ್ಯಮಾಪನ: ಲೇಖಶ್ರೀ ರಾಜ್ಯಕ್ಕೆ ತೃತೀಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 12:47 IST
Last Updated 7 ಜೂನ್ 2023, 12:47 IST
ಬಿ.ಎಂ.ಲೇಖಾಶ್ರೀ
ಬಿ.ಎಂ.ಲೇಖಾಶ್ರೀ   

ಮುಳಬಾಗಿಲು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಮುಳಬಾಗಿಲು ನಗರದ ಅಮರಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲೇಖಶ್ರೀ ಬಿ.ಎಂ 623 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಮತ್ತು ರಾಜ್ಯಕ್ಕೆ ತೃತೀಯ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

ಮಾರ್ಚ್‌ 2023ರಲ್ಲಿ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ 611 ಅಂಕ ಪಡೆದಿದ್ದಳು. ನಂತರ ಮರುಮೌಲ್ಯಮಾಪನ ಮಾಡಿದಾಗ 12 ಅಂಕ ಹೆಚ್ಚು ಬಂದಿದೆ.

ಮರು ಮೌಲ್ಯಮಾಪನದ ನಂತರ ವಿಜ್ಞಾನ ವಿಷಯದಲ್ಲಿ 98 ಅಂಕ ಪಡೆದಿದ್ದು, ಉಳಿದ 5 ವಿಷಯಗಳಲ್ಲಿ ಶೇ 100ರಷ್ಟು ಅಂಕ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.