ADVERTISEMENT

ನೀರಿನಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಬಾಲಕರ ಸಾವು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 20:23 IST
Last Updated 3 ಸೆಪ್ಟೆಂಬರ್ 2020, 20:23 IST
   

ಬಂಗಾರಪೇಟೆ: ಅತ್ತಿಗಿರಿಕೊಪ್ಪ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಗುರುವಾರ
ಮೃತಪಟ್ಟಿದ್ದಾರೆ.

ಬೆಂಗಳೂರು ಬಿ.ಜಿ.ಹಳ್ಳಿಯ ಅಸ್ಲಾಂ ಷರೀಫ್ ಮಕ್ಕಳಾದ ಅಶ್ವಕ್ ಷರೀಫ್ (18), ತಾಜ್ ಮೊಯುದ್ದೀನ್ (12) ಮೃತಪಟ್ಟವರು. ಅಶ್ವಕ್, ಪದವಿ ಪ್ರಥಮ ವರ್ಷ, ತಾಜ್, 7ನೇ ತರಗತಿ ಓದುತ್ತಿದ್ದರು. ಅತ್ತಿಗಿರಿ ಕೊಪ್ಪದ ತನ್ನ ಅತ್ತೆಯ ಮನೆಗೆ ಬಂದಿದ್ದರು. ಸಂಬಂಧಿಕರೆಲ್ಲರೂ ದರ್ಗಾಕ್ಕೆ ಪೂಜೆಗೆ ತೆರಳಿದ್ದಾಗ ನಾಲ್ಕು ಬಾಲಕರು ಕೆರೆಯತ್ತ ಹೋದರು. ಕೆರೆಗಿಳಿದ ಇಬ್ಬರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಇನ್ನಿಬ್ಬರು, ಸಂಬಂಧಿಕರನ್ನು ಕರೆತರುವಷ್ಟರಲ್ಲಿ ನೀರಿನಲ್ಲಿ ಮುಳುಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT