ADVERTISEMENT

23ರಂದು ಯಲಬುರ್ಗಾ ಬಂದ್‌ಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 11:40 IST
Last Updated 14 ಫೆಬ್ರುವರಿ 2011, 11:40 IST

ಯಲಬುರ್ಗಾ: ಲಿಂಗಾಯತ ಸಮಾಜಕ್ಕೆ ಸೇರಿದ ಸ್ವಾಮೀಜಿಗಳಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡುವುದನ್ನು ವಿರೋಧಿಸಿ ಇದೇ 23ರಂದು ಯಲಬುರ್ಗಾ ಬಂದ್ ಕರೆ ನೀಡಲಾಗಿದೆ ಎಂದು ವಿವಿಧ ಸಮಾಜದ ಮುಖಂಡರು ಹೇಳಿದ್ದಾರೆ.ಭಾನುವಾರ ಸಭೆ ಸೇರಿ ಈ ತೀರ್ಮಾನ ಕೈಗೊಳ್ಳಲಾಗಿದೆ, ಬಂದ್ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಚಲವಾದಿ ಸಮಾಜದ ಬಾಲರಾಜ ಮಂಗಳೂರ, ಡಿ.ಕೆ. ಪರುಶುರಾಮ, ಮಾದರ ಸಮಾಜದ ಹುಲಗಪ್ಪ ಬೇವೂರ, ವಸಂತ ಭಾವಿಮನಿ ಬಂಜಾರ ಸಮಾಜದ ಟೋಪ್ಪಣ್ಣ ನಾಯಕ ಹಾಗೂ ಇತರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.