ADVERTISEMENT

ಗೆದಗೇರಿ ತಾಂಡಾ: ಕೋವಿಡ್ ಜಾಗೃತಿ

​ಪ್ರಜಾವಾಣಿ ವಾರ್ತೆ
Published 9 ಮೇ 2021, 5:27 IST
Last Updated 9 ಮೇ 2021, 5:27 IST
ಯಲಬುರ್ಗಾ ತಾಲ್ಲೂಕಿನ ಗೆದಗೇರಿ ತಾಂಡಾದಲ್ಲಿ ಪಿಡಿಒ ವೀರಭದ್ರಪ್ಪ ಮೂಲಿಮನಿ ನೇತೃತ್ವದಲ್ಲಿ ಕೋವಿಡ್ ಜಾಗೃತಿ ಮೂಡಿಸಲಾಯಿತು
ಯಲಬುರ್ಗಾ ತಾಲ್ಲೂಕಿನ ಗೆದಗೇರಿ ತಾಂಡಾದಲ್ಲಿ ಪಿಡಿಒ ವೀರಭದ್ರಪ್ಪ ಮೂಲಿಮನಿ ನೇತೃತ್ವದಲ್ಲಿ ಕೋವಿಡ್ ಜಾಗೃತಿ ಮೂಡಿಸಲಾಯಿತು   

ಗೆದಗೇರಿ ತಾಂಡಾ (ಯಲಬುರ್ಗಾ): ತಾಲ್ಲೂಕಿನ ಗೆದಗೇರಿ ತಾಂಡಾದಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮ ನಡೆಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರಭದ್ರಪ್ಪ ಮೂಲಿಮನಿ ಮಾತನಾಡಿ,‘ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪ್ರತಿಯೊಬ್ಬರೂ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಸ್ವಚ್ಛತೆ ಕಾಯ್ದುಕೊಳ್ಳವುದು ಅವಶ್ಯ. ಅಗತ್ಯ ವಸ್ತುಗಳ ಖರೀದಿ ಜನ ಮುಗಿ ಬೀಳಬಾರದು’ ಎಂದು ಅವರು ಹೇಳಿದರು.

ಅಧ್ಯಕ್ಷೆ ನಿಂಗವ್ವ ಕಲ್ಲೂರು ಹಾಗೂ ಉಪಾಧ್ಯಕ್ಷ ಶರಣಪ್ಪ ಕೊಪ್ಪದ ಮಾತನಾಡಿ,‘ಕೋವಿಡ್ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ದೊಡ್ಡದಿದೆ. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಅರೋಗ್ಯ ಇಲಾಖೆಯ ಶ್ರೀದೇವಿ ತೋಟದ, ವಿದ್ಯಾ ಕುಡಗುಂಟಿ, ಅಂಗನವಾಡಿ ಮೇಲ್ವಿಚಾರಕಿ ಜಯಶ್ರೀ ಕುದರಿ, ಆಶಾ ಕಾರ್ಯಕರ್ತೆ ಭಾಗ್ಯಶ್ರೀ ಗೊಲ್ಲರ, ಜಯಶ್ರೀ ಕುರ್ನಾಳ, ತಾಂಡದ ಸದಸ್ಯ ತಿರುಪತಿ ಬಸರಗಿಡ, ನಾಗರಾಜ ರಾಠೋಡ ಹಾಗೂ ಕಳಕಯ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.