ಹನುಮಸಾಗರ: ‘ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಕೋವಿಡ್ ಸರಪಳಿ ತುಂಡರಿಸಲು ನೆರವಾಗಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಫಾರುಕ್ ಡಾಲಾಯತ್ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಸಣ್ಣ ವ್ಯಾಪಾರಿಗಳು ಹಾಗೂ ಕೂಲಿಕಾರ್ಮಿಕರಿಗೆ ಕಾಂಗ್ರೆಸ್ ಪಕ್ಷದಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಸದಸ್ಯರಾದ ಸಂಗಮೇಶ ಕರಂಡಿ, ಪ್ರಶಾಂತ ಕುಲಕರ್ಣಿ, ಲಕ್ಷ್ಮೀ ಮಂಜುನಾಥ ಶಿರೋಳ, ಮುಖಂಡರಾದ ಈರಣ್ಣ ಬದಾಮಿ, ಶಬ್ಬೀರ್ ಹುನಗುಂದ, ಮುತ್ತಣ್ಣ, ಗುರಪ್ಪ, ಶಂಕ್ರಪ್ಪ, ಸೋಮನಾಥ ಚಿಲುಮಿ ಹಾಗೂ ನಾಗರಾಜ ಪಟ್ಟಣಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.