ಯಲಬುರ್ಗಾ: ಇಲ್ಲಿನ ಸಿಪಿಐ ಎಂ.ನಾಗರಡ್ಡಿ ಅವರು ಕೆಟ್ಟುನಿಂತ ಸ್ಕಾರ್ಪಿಯೊವನ್ನು ಎಳೆದು ಪಕ್ಕಕ್ಕೆ ನಿಲ್ಲಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ವಿಡಿಯೊ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಅವರು ಕೆಲಸದ ನಿಮಿತ್ತ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಹಿಂದಿರುಗುವಾಗ ವಾಹನ ಕೆಟ್ಟು ನಿಂತಿತು. ಚಾಲಕ ಮೆಕ್ಯಾನಿಕ್ ಅವರನ್ನು ಕರೆದುಕೊಂಡು ಬರಲು ಹೋಗಿದ್ದರು. ಈ ವೇಳೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಸಿಪಿಐ ಗಮನಿಸಿದ್ದಾರೆ. ಒಬ್ಬರೇ ಸ್ಕಾರ್ಪಿಯೊ ವಾಹನವನ್ನು ಎಳೆದು ಪಕ್ಕಕ್ಕೆ ನಿಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅವರನ್ನು ಬಾಹುಬಲಿ ಎಂದು ಬಣ್ಣಿಸಿದ್ದಾರೆ. ಕೆಲವರು ಸಾಮಾಜಿಕ ಜವಾಬ್ದಾರಿ ಮತ್ತು ಕರ್ತವ್ಯ ಪ್ರಜ್ಞೆ ಹೊಂದಿದವರು ಎಂದು ಹೊಗಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.