ADVERTISEMENT

ಮೂರು ಚಿನ್ನದ ಪದಕ ಮುಡಿಗೇರಿಸಿಕೊಂಡ ದೌಲತ್ ಬಾನು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 13:20 IST
Last Updated 11 ಸೆಪ್ಟೆಂಬರ್ 2024, 13:20 IST
ಮೂರು ಚಿನ್ನದ ಪದಕ ಹಾಗೂ ಪ್ರಮಾಣಪತ್ರ ಪ್ರದರ್ಶಿಸಿದ ದೌಲತ ಬಾನು ಹಾಗೂ ಅವರ ತಂದೆ ಮೌಲಸಾಬ ಬಡಿಗೇರ 
ಮೂರು ಚಿನ್ನದ ಪದಕ ಹಾಗೂ ಪ್ರಮಾಣಪತ್ರ ಪ್ರದರ್ಶಿಸಿದ ದೌಲತ ಬಾನು ಹಾಗೂ ಅವರ ತಂದೆ ಮೌಲಸಾಬ ಬಡಿಗೇರ    

ಕನಕಗಿರಿ: ಇಲ್ಲಿನ ಸೂಳೇಕಲ್ ಓಣಿಯ ಕೂಲಿ‌ ಕಾರ್ಮಿಕ ಮೌಲಸಾಬ ಮೋದಿನಸಾಬ ಬಡಿಗೇರ ಅವರ ಪುತ್ರಿ ದೌಲತ್ ಬಾನು ಅವರು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ (ಎಂ.ಕಾಂ) ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ಸದ್ಯ ಸಿರಗುಪ್ಪ ತಾಲ್ಲೂಕಿನ ಉಡೇಗೋಳ ಗ್ರಾಮದಲ್ಲಿ ವಾಸಿಸುತ್ತಿರುವ ದೌಲತ್ ಬಾನು ಅವರಿಗೆ ಈಚೆಗೆ ನಡೆದ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗಿದೆ. 

ತಂದೆ–ತಾಯಿ ಕೂಲಿ ಕೆಲಸ ಮಾಡುತ್ತಿದ್ದಾರೆ. ದೌಲತ ಬಾನು ಅವರ ಚಿಕ್ಕಪ್ಪ ಕುಷ್ಟಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ದಸ್ತಗೀರಸಾಬ ಬಡಿಗೇರ ಅವರು ದೌಲತ ಬಾನು ಅವರ ಶಿಕ್ಷಣಕ್ಕೆ ನೆರವಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.