ADVERTISEMENT

ಅಮೆರಿಕ ಕನ್ನಡ ಅಕಾಡೆಮಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 5:31 IST
Last Updated 11 ಅಕ್ಟೋಬರ್ 2020, 5:31 IST
ಡಾ.ಉದಯಶಂಕರ ಪುರಾಣಿಕ
ಡಾ.ಉದಯಶಂಕರ ಪುರಾಣಿಕ   

ಕೊಪ್ಪಳ: ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ 30 ದೇಶಗಳಲ್ಲಿ ಕನ್ನಡ ನಾಡು, ನುಡಿ, ಶಿಕ್ಷಣ ಮತ್ತು ಪ್ರಚಾರ ಕೆಲಸ ಮಾಡುತ್ತಿರುವ ಅಮೆರಿಕ ಮೂಲದ ‘ಕನ್ನಡ ಅಕಾಡೆಮಿ’ ಕೇಂದ್ರ ಸಮಿತಿಗೆ ಸದಸ್ಯಹಾಗೂಮಾರ್ಗದರ್ಶಕರಾಗಿ ಜಿಲ್ಲೆಯಡಾ.ಉದಯಶಂಕರ ಪುರಾಣಿಕ ಅವರನ್ನು ನೇಮಕ ಮಾಡಿದೆ.

ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಾಹಿತಿ ಅನ್ನದಾನಯ್ಯ ಪುರಾಣಿಕ, ನೀಲಾಂಬಿಕೆ ಪುರಾಣಿಕಅವರ ಪುತ್ರ ಉದಯಶಂಕರ ಪುರಾಣಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಆನಂದಕಂದ ಡಾ.ಸಿದ್ಧಯ್ಯ ಪುರಾಣಿಕ, ಕಲ್ಲಿನಾಥ ಶಾಸ್ತ್ರಿಇವರ ದೊಡ್ಡಪ್ಪನವರು.

ಕೇಂದ್ರ ಸರ್ಕಾರದಅಟಲ್‌ ಇನ್ನೋವೇಶನ್ ಸಂಸ್ಥೆಯ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಆವಿಷ್ಕಾರ ಮಾಡಿದ ಕೋಲ್ಡ್‌ ಸ್ಟೋರೇಜ್‌ ತಂತ್ರಜ್ಞಾನ ಎಲ್ಲ ಹಸ್ತಪ್ರತಿ ವಸ್ತುಸಂಗ್ರಹಾಲಯಗಳಲ್ಲಿ ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಇವರ ನೇಮಕದಿಂದ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.