ಹನುಮಸಾಗರ: ‘ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರು ಗ್ರಾಮವನ್ನು ಅಭಿವೃದ್ಧಿಪಡಿಸಬೇಕು’ ಎಂದು ಲಕ್ಷ್ಮೀವೆಂಕಟೇಶ ದೇವಸ್ಥಾನ ಸಮಿತಿ ಸದಸ್ಯ ಪ್ರಾಣೇಶಾಚಾರ್ಯ ಪುರೋಹಿತ ಸಲಹೆ ನೀಡಿದರು.
ಪೂರ್ಣಪ್ರಜ್ಞ ಸೇವಾ ಸಮಿತಿ ವತಿಯಿಂದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಪ್ರಶಾಂತ ಕುಲಕರ್ಣಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಡಿತ ಪ್ರಹ್ಲಾದಾಚಾರ್ಯ ಪೂಜಾರ ಮಾತನಾಡಿದರು.
ವೆಂಕಟೇಶಾಚಾರ ಪುರೋಹಿತ, ರಾಜೇಂದ್ರ ಪಂತ, ಗುರಾಚಾರ ಕಟ್ಟಿ, ಡಿ.ಎಚ್.ಕುಲಕರ್ಣಿ, ರಾಘವೇಂದ್ರಾಚಾರ ಹಯಗ್ರೀವ್,
ಲಕ್ಷ್ಮೀನಾರಾಯಣ ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ಬಣ್ಣಾಚಾರ ಕಟ್ಟಿ, ಶಾಮರಾವ್ ಪ್ಯಾಟಿ, ಲಕ್ಷ್ಮಣರಾವ್ ಕುಲಕರ್ಣಿ, ಪಿ.ಕೆ.ಪುರೋಹಿತ, ಗುರಾಚಾರ ಕೊಳ್ಳಿ, ಗಿರೀಶ ಪಟವಾರಿ, ದಾಮೋದರ ಹಯಗ್ರೀವ್, ತಿಮ್ಮಣ್ಣಾಚಾರ ಭಂಡಾರಿ, ಶೇಷಾಚಾರ ಎಣ್ಣಿ, ಕೃಷ್ಣಮೂರ್ತಿ ದೇಸಾಯಿ ಹಾಗೂ ಸುಶೀಲೇಂದ್ರ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.