ADVERTISEMENT

‘ನೂತನ ಪ್ರತಿನಿಧಿಗಳು ಅಭಿವೃದ್ಧಿ ಮಾಡಿ’

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 11:04 IST
Last Updated 22 ಫೆಬ್ರುವರಿ 2021, 11:04 IST
ಹನುಮಸಾಗರದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಪ್ರಶಾಂತ ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು
ಹನುಮಸಾಗರದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಪ್ರಶಾಂತ ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು   

ಹನುಮಸಾಗರ: ‘ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರು ಗ್ರಾಮವನ್ನು ಅಭಿವೃದ್ಧಿಪಡಿಸಬೇಕು’ ಎಂದು ಲಕ್ಷ್ಮೀವೆಂಕಟೇಶ ದೇವಸ್ಥಾನ ಸಮಿತಿ ಸದಸ್ಯ ಪ್ರಾಣೇಶಾಚಾರ್ಯ ಪುರೋಹಿತ ಸಲಹೆ ನೀಡಿದರು.

ಪೂರ್ಣಪ್ರಜ್ಞ ಸೇವಾ ಸಮಿತಿ ವತಿಯಿಂದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಪ್ರಶಾಂತ ಕುಲಕರ್ಣಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಡಿತ ಪ್ರಹ್ಲಾದಾಚಾರ್ಯ ಪೂಜಾರ ಮಾತನಾಡಿದರು.

ADVERTISEMENT

ವೆಂಕಟೇಶಾಚಾರ ಪುರೋಹಿತ, ರಾಜೇಂದ್ರ ಪಂತ, ಗುರಾಚಾರ ಕಟ್ಟಿ, ಡಿ.ಎಚ್.ಕುಲಕರ್ಣಿ, ರಾಘವೇಂದ್ರಾಚಾರ ಹಯಗ್ರೀವ್,
ಲಕ್ಷ್ಮೀನಾರಾಯಣ ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ಬಣ್ಣಾಚಾರ ಕಟ್ಟಿ, ಶಾಮರಾವ್ ಪ್ಯಾಟಿ, ಲಕ್ಷ್ಮಣರಾವ್ ಕುಲಕರ್ಣಿ, ಪಿ.ಕೆ.ಪುರೋಹಿತ, ಗುರಾಚಾರ ಕೊಳ್ಳಿ, ಗಿರೀಶ ಪಟವಾರಿ, ದಾಮೋದರ ಹಯಗ್ರೀವ್, ತಿಮ್ಮಣ್ಣಾಚಾರ ಭಂಡಾರಿ, ಶೇಷಾಚಾರ ಎಣ್ಣಿ, ಕೃಷ್ಣಮೂರ್ತಿ ದೇಸಾಯಿ ಹಾಗೂ ಸುಶೀಲೇಂದ್ರ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.