
ಕೊಪ್ಪಳ: ಸದಾ ಸರಳತೆಯ ಮೂಲಕ ಜನಮಾನಸದಲ್ಲಿ ಸ್ಥಾನ ಗಳಿಸಿರುವ ಇಲ್ಲಿನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪಾತ್ರೆಗಳನ್ನು ತೊಳೆಯುವ ಮೂಲಕ ಸರಳತೆ ಮೆರೆದಿದ್ದಾರೆ.
ಗವಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಅವರಾತ್ರಿ ಅಮವಾಸ್ಯೆ ಶುಕ್ರವಾರ ಲಕ್ಷಾಂತರ ಭಕ್ತರು ಮಹಾದಾಸೋಹ ಸವಿದಿದ್ದರು. ಮಠದ ಭಕ್ತರು ಹಾಗೂ ಸ್ವಯಂಸೇವಕರು ಸ್ವಾಮೀಜಿ ಜೊತೆ ಕೈ ಜೋಡಿಸಿ ಪಾತ್ರೆ ತೊಳೆದಿದ್ದಾರೆ.
ಮಠದ ಆವರಣದಲ್ಲಿ ಕಸಗೂಡಿಸುವುದು, ಪಾತ್ರೆ ತೊಳೆಯುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿರುವುದು ಭಕ್ತರ ಮೆಚ್ಚುಗೆಗೆ ಕಾರಣವಾಗಿದೆ. ಪ್ರತಿ ಜಾತ್ರೆಯ ಸಮಯದಲ್ಲಿಯೂ ಸ್ವಾಮೀಜಿ ಈ ಕೆಲಸ ಮಾಡುತ್ತ ಬಂದಿದ್ದಾರೆ. ಸ್ವಾಮೀಜಿ ಕಾರ್ಯವನ್ನು ನೋಡಿದ ಅನೇಕರು ತಾವೂ ಸಹ ಜಾತ್ರೆಯ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.