ADVERTISEMENT

ವಿಡಿಯೊ ಸ್ಟೋರಿ | ಕೊಪ್ಪಳದಲ್ಲಿ ಮಳೆಗಾಗಿ ಪರ್ಜನ್ಯ ಹೋಮ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 8:35 IST
Last Updated 6 ಜೂನ್ 2019, 8:35 IST
ಕೊಪ್ಪಳದಲ್ಲಿ ಗುರುವಾರ ಪರ್ಜನ್ಯ ಹೋಮ ನಡೆಯಿತು.
ಕೊಪ್ಪಳದಲ್ಲಿ ಗುರುವಾರ ಪರ್ಜನ್ಯ ಹೋಮ ನಡೆಯಿತು.   

ಕೊಪ್ಪಳ:ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಗಾಗಿ ಹಾಗೂ ಬರ ದೂರವಾಗುವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಗುರುವಾರ ಬೆಳಗ್ಗೆ ಪರ್ಜನ್ಯ ಹೋಮ, ವಿಶೇಷ ಪೂಜೆ ನೆರವೇರಿಸಲಾಯಿತು.

ಜಿಲ್ಲೆಯ ಪೌರಾಣಿಕ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನದಲ್ಲಿ ಪರ್ಜನ್ಯ ಹೋಮ, ಜಲಾಧಿವಾಸ, ವಿಶೇಷ ಪೂಜೆ ಸಲ್ಲಿಸಿದರೆ ಹನುಮಂತ ಜನಿಸಿದ ಅಂಜನಾದ್ರಿ ಮತ್ತು ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ಸಂಕಲ್ಪ ಮಾಡಲಾಯಿತು.

ದ್ವಿಜರಿಂದ ಹೋಮ, ಪೂಜೆ ನೆರವೇರಿಸಲಾಯಿತು. ಇಂದು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಪರ್ಜನ್ಯ ಹೋಮ ಹಮ್ಮಿಕೊಂಡ ಕಾರಣಕ್ಕೆ ಎಲ್ಲಿಯೂ ಸಹ ದ್ವಿಜರು ಸಿಕ್ಕಿರಲಿಲ್ಲ. ಹೀಗಾಗಿ ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಅವರು ಹೊಸಪೇಟೆಯಿಂದ ದ್ವಿಜರನ್ನು ಕರೆತಂದು ಹೋಮ‌ ಮಾಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.