ADVERTISEMENT

ಮಕ್ಕಳ್ಳಿ: ಕಲ್ಲಿನಾಥ ದೇಗುಲದ ನಂದಿ ವಿಗ್ರಹ ಕಳವು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 16:28 IST
Last Updated 21 ಮಾರ್ಚ್ 2024, 16:28 IST
ಯಲಬುರ್ಗಾ ತಾಲ್ಲೂಕು ಮಕ್ಕಳ್ಳಿ ಹೊರವಲಯದ ಕಲ್ಲಿನಾಥೇಶ್ವರ ದೇವಸ್ಥಾನವನ್ನು ಗ್ರಾಮದ ಶಿವಾನಂದ ಸ್ವಾಮೀಜಿ ಹಾಗೂ ಮುಖಂಡರು ಪರಿಶೀಲಿಸಿದರು
ಯಲಬುರ್ಗಾ ತಾಲ್ಲೂಕು ಮಕ್ಕಳ್ಳಿ ಹೊರವಲಯದ ಕಲ್ಲಿನಾಥೇಶ್ವರ ದೇವಸ್ಥಾನವನ್ನು ಗ್ರಾಮದ ಶಿವಾನಂದ ಸ್ವಾಮೀಜಿ ಹಾಗೂ ಮುಖಂಡರು ಪರಿಶೀಲಿಸಿದರು   

ಯಲಬುರ್ಗಾ: ತಾಲ್ಲೂಕಿನ ಮಕ್ಕಳ್ಳಿ ಗ್ರಾಮದ ಹೊರವಲಯದಲ್ಲಿರುವ ಪುರಾತನ ಕಾಲದ ಕಲ್ಲಿನಾಥ ದೇವಾಲಯದಲ್ಲಿ ನಂದಿ ವಿಗ್ರಹವು ಕಳವು ನಡೆದಿದೆ.

ಈ ಬಗ್ಗೆ ಬೇವೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೇವಸ್ಥಾನದಲ್ಲಿನ ಈ ನಂದಿ ವಿಗ್ರಹ ಕಳವು ನಿಧಿಗಳ್ಳರು ಮಾಡಿರುವ ಕೃತ್ಯ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಸಂಜೆ ವೇಳೆ ದೇವಸ್ಥಾನದ ಕಡೆ ಜನರು ಬರುವುದಿಲ್ಲ. ಇದನ್ನು ಗಮನಿಸಿಯೇ ಯಾರೋ ವಿಗ್ರಹವನ್ನು ಕದ್ದಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ಒತ್ತಾಯ: ಗ್ರಾಮದ ಶಿವಾನಂದಮಠದ ಶಿವಾನಂದ ಸ್ವಾಮೀಜಿ, ನೀಲನಗೌಡ ಹೊಸ್ಮನಿ, ನಿಂಗರಾಜ ಹೊಸ್ಮನಿ, ಬಸಣ್ಣ ದಮ್ಮೂರ, ವೀರಭದ್ರಪ್ಪ ಪತ್ತಾರ, ದೇವಪ್ಪ ಆರೇರ, ಶೇಖರಗೌಡ ಪೊಲೀಸ್‍ಪಾಟೀಲ ಸೇರಿ ಇತರರು ಕಿಡಿಗೇಡಿಗಳು ಮಾಡಿರುವ ಕೃತ್ಯದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಸರ್ಕಾರ ಹೊಸ ಮೂರ್ತಿಯ ಸ್ಥಾಪನೆಗೆ ಮುತುವರ್ಜಿ ತೋರಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.