ADVERTISEMENT

ಮೇಣೆದಾಳ: ದೇಸಾಯಿ ವಾಡೆಯಲ್ಲಿ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 12:25 IST
Last Updated 17 ಮಾರ್ಚ್ 2021, 12:25 IST
ತಾವರಗೇರಾ ಸಮೀಪದ ಮೇಣೆದಾಳ ಗ್ರಾಮದ ವಾಡೆಯಲ್ಲಿ ಜಗನ್ನಾಥ ದಾಸರ ಜೀವನಾಧಾರಿತ ಕಿರುಚಿತ್ರದ ಚಿತ್ರೀಕರಣ ನಡೆಯಿತು
ತಾವರಗೇರಾ ಸಮೀಪದ ಮೇಣೆದಾಳ ಗ್ರಾಮದ ವಾಡೆಯಲ್ಲಿ ಜಗನ್ನಾಥ ದಾಸರ ಜೀವನಾಧಾರಿತ ಕಿರುಚಿತ್ರದ ಚಿತ್ರೀಕರಣ ನಡೆಯಿತು   

ಮೇಣೆದಾಳ (ತಾವರಗೇರಾ): ಸಮೀಪದ ಮೇಣೆದಾಳ ಗ್ರಾಮದಲ್ಲಿರುವ ದೇಸಾಯಿಯವರ ಕುಟುಂಬಕ್ಕೆ ಸೇರಿದ ವಾಡೆಯಲ್ಲಿ ಜಗನ್ನಾಥ ದಾಸರ ಜೀವನಾಧಾರಿತ ಕಿರುಚಿತ್ರದ ಚಿತ್ರೀಕರಣ ನಡೆಯುತ್ತಿದೆ.

‘ಬೆಂಗಳೂರಿನ ಮಾತಾಂಬುಜಾ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮಂತ್ರಾಲಯದಲ್ಲಿ ಶ್ರೀಗಳು ಚಾಲನೆ ನೀಡಿದ್ದಾರೆ. ರಾಯರ 350 ನೇ ಆರಾಧನಾ ಮಹೋತ್ಸವದ ದಿನ ಇದನ್ನು ಬಿಡುಗಡೆ ಮಾಡುವ ಗುರಿ ಇದೆ’ ಎಂದು ನಿರ್ದೇಶಕ ಮಧುಸೂದನ್ ಹವಲ್ದಾರ ತಿಳಿಸಿದರು.

‘ಕಿರುತೆರೆ ನಟ, ನಟಿಯರು ನಟಿಸುತ್ತಿದ್ದಾರೆ. ನಟಿ ನಿಶ್ಚಿತಾ ಶೆಟ್ಟಿ, ಹೈದರಾಬಾದ್‌ನ ಶರತ್, ರಾಯಚೂರಿನ ಧೀರೇಂದ್ರ, ಪದ್ಮಕಲಾ, ಸುರೇಶ ಹಾವೇರಿ ನಟಿಸುತ್ತಿದ್ದಾರೆ. ಮೆಣೇದಾಳ ದೇಸಾಯಿ ಮನೆತನದ ಧನಶ್ರೀ ದೇವಿ ಗೌರವ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಚಿತ್ರೀಕರಣ ಮುಗಿಸಿಕೊಂಡು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಶೂಟಿಂಗ್‌ ನಡೆಸಲಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.