ADVERTISEMENT

ಕೊಪ್ಪಳ: ಸರಳವಾಗಿ ನಡೆದ ಗವಿಮಠದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 3:55 IST
Last Updated 19 ಜನವರಿ 2022, 3:55 IST
ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ರಥೋತ್ಸವ ಬುಧವಾರ ನಸುಕಿನ ಜಾವ ನಡೆಯಿತು
ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ರಥೋತ್ಸವ ಬುಧವಾರ ನಸುಕಿನ ಜಾವ ನಡೆಯಿತು   

ಕೊಪ್ಪಳ: ಇಲ್ಲಿನ ಶ್ರೀ ಸಂಸ್ಥಾನ ಗವಿಮಠದ ಗವಿಸಿದ್ಧೇಶ್ವರ ರಥೋತ್ಸವ ನಸುಕಿನ ಜಾವ 4.15 ಕ್ಕೆ ಕೋವಿಡ್ ನಿಯಮದ ಅನುಸಾರ ಸೀಮಿತ ಭಕ್ತರ ಮಧ್ಯೆ ನಡೆಯಿತು.

ರಥವನ್ನು ಯಾವ ಸಮಯದಲ್ಲಿ ಎಳೆಯಬೇಕು ಎಂಬ ಸಮಯ ನಿರ್ಧಾರ ಮಾಡುವಲ್ಲಿ ಮಂಗಳವಾರ ತಡರಾತ್ರಿವರೆಗೂ ಯಾವುದೇ ಅಧಿಕೃತ ಹೇಳಿಕೆ ಹೊರಬೀಳಲಿಲ್ಲ.

ಹೆಚ್ಚಿನ ಸಂಖ್ಯೆಯ ಜನರು ಸೇರುವ ಭಯದಿಂದ ಮಠದ ಆಡಳಿತ ಮಂಡಳಿ ಕೊನೆಯ ಕ್ಷಣದಲ್ಲಿ ಘೋಷಣೆ ಮಾಡಿತು.

ADVERTISEMENT

ನಿರ್ಭಂಧದ ನಡುವೆಯೂ ರಥೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

ಕೋವಿಡ್ ನಿಯಮ ಪಾಲನೆ ಅಂಗವಾಗಿ ಪೊಲೀಸರು ಬಿಗಿಬಂದೋಬಸ್ತ್ ಮಾಡಿದ್ದರು.

ಮಧ್ಯರಾತ್ರಿಯೇ ಮಠದ ರಥದ ಮೈದಾನದಲ್ಲಿ ಜನರು ನೆರೆದಿದ್ದರು. ಬೆಳಿಗ್ಗೆ ಗವಿಸಿದ್ಧೇಶ್ವರನ ಗದ್ದುಗೆಗೆ ರುದ್ರಾಭಿಷೇಕ, ಪಲ್ಲಕ್ಕಿ ಮೆರವಣಿಗೆ, ಲಘು ರಥೋತ್ಸವ ನಡೆಯಿತು.

ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ತೇರು ಎಳೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.