ADVERTISEMENT

ಕೊಪ್ಪಳ: ಒಂದೇ ಕುಟುಂಬದ ಮೂವರು ಶಂಕಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 28 ಮೇ 2024, 5:57 IST
Last Updated 28 ಮೇ 2024, 5:57 IST
<div class="paragraphs"><p>ರಾಜೇಶ್ವರಿ, ವಸಂತ, ಮತ್ತು   ಸಾಯಿತೇಜ&nbsp;ಮೃತರು</p></div>

ರಾಜೇಶ್ವರಿ, ವಸಂತ, ಮತ್ತು ಸಾಯಿತೇಜ ಮೃತರು

   

ಕೊಪ್ಪಳ: ಕೊಪ್ಪಳ ತಾಲ್ಲೂಕಿನ ಹೊಸ ಲಿಂಗಾಪುರ ಗ್ರಾಮದ ಆಶ್ರಯ ಕಾಲೊನಿಯ ಮೂರನೇ ವಾರ್ಡಿನಲ್ಲಿ ಒಂದೇ ಕುಟುಂಬದ ಮೂವರು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಜೇಶ್ವರಿ( 50) ವಸಂತ (28) ಮತ್ತು ವಸಂತ ಅವರ 5 ವರ್ಷದ ಮಗ ಸಾಯಿತೇಜ ಮೃತಪಟ್ಟವರು. ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು.

ADVERTISEMENT

ಘಟನೆ ‌ನಡೆದ ಸುತ್ತಮುತ್ತಲಿನ ಮನೆಗಳ ಜನ ಮಂಗಳವಾರ ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮುನಿರಾಬಾದ್ ಠಾಣಯ ಪಿಎಸ್ ಐ ಎಚ್.ಸುನಿಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಶ್ವಾನ ದಳ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.