ಕೊಪ್ಪಳ: ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಕಾರಣ ತಾಲ್ಲೂಕಿನ ಹಳೆ ಗೊಂಡಬಾಳ ಗ್ರಾಮದಲ್ಲಿ ಮುತೈದೆಯರು ಮಂಗಳವಾರ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿದರು. ‘ನಮ್ಮೂರಿಗೆ ಬಂದು ಹಾನಿ ಪಡಿಸಬೇಡ; ಸಾಕು ಮುಂದೆ ಹೋಗು’ ಎಂದು ಪ್ರಾರ್ಥಿಸಿಕೊಂಡರು.
ತಾಲ್ಲೂಕಿನ ಹಿರೇಹಳ್ಳ ಜಲಾಶಯದಿಂದ ಹಳ್ಳಕ್ಕೆ ನೀರು ಬಿಟ್ಟಿದ್ದರಿಂದ ಹಲವು ಗ್ರಾಮಗಳಿಗೆ ನೀರು ಹೊಕ್ಕಿದ್ದು ಇದರಿಂದ ತುಂಗಭದ್ರಾ ನದಿ ಪಾತ್ರದ ಹಿನ್ನಿರಿನಲ್ಲಿ ಪ್ರವಾಹದ ಆತಂಕ ಮೂಡಿದೆ. ಹೀಗಾಗಿ ಅಲ್ಲಿನ ಜನ ಹಿರೇಹಳ್ಳದ ನೀರು ತಮ್ಮೂರಿಗೆ ಬರಬಾರದು ಎಂದು ಪೂಜೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.