ADVERTISEMENT

ಹನುಮಸಾಗರ: ಜ್ಞಾನೋದಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಡಗರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 15:55 IST
Last Updated 26 ಆಗಸ್ಟ್ 2024, 15:55 IST
ಹನುಮಸಾಗರದ ‌ಜ್ಞಾನೋದಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣ–ರಾಧೆಯ ವೇಷದಲ್ಲಿ ಕಂಗೊಳಿಸಿದರು
ಹನುಮಸಾಗರದ ‌ಜ್ಞಾನೋದಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣ–ರಾಧೆಯ ವೇಷದಲ್ಲಿ ಕಂಗೊಳಿಸಿದರು   

ಹನುಮಸಾಗರ: ಇಲ್ಲಿನ ಜ್ಞಾನೋದಯ ಶಾಲೆಯಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಜ್ಞಾನೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಶುರಾಮ ರಜಪೂತ ಮತ್ತು ಶಾಲೆಯ ಸಂಸ್ಥಾಪಕ ವಿಷ್ಣು ರಜಪೂತ ಅವರು ಮಕ್ಕಳಿಗೆ ಕೃಷ್ಣ ಜನ್ಮಾಷ್ಟಮಿಯ ಮಹತ್ವ ವಿವರಿಸಿದರು.

ಪರಶುರಾಮ ರಜಪೂತ ಮಾತನಾಡಿ, ‘ಶ್ರೀಕೃಷ್ಣನ ಜನ್ಮದಿನ ಚಂದ್ರಮಾನದ ಲೆಕ್ಕದಲ್ಲಿ ಶ್ರಾವಣದ ಕೃಷ್ಣ ಅಷ್ಟಮಿಯಂದು ಮತ್ತು ಸೌರಮಾನದ ಲೆಕ್ಕದಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದಂದು ಆಚರಿಸಲಾಗುತ್ತದೆ’ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಮಹೇಶ ನೇತೃತ್ವವಹಿಸಿದ್ದರು. ಗುರುದೇವ ಮತ್ತು ಸಹಕಾರಿಗಳಾದ ರಾಮದಾಸ, ಮಹೇಂದ್ರ, ಶಕುಂತಲಾ, ಪ್ರೇಮ, ಸರೋಜಾ, ಅಂಬಿಕಾ, ಸುಷ್ಮಿತಾ, ಶಂಕ್ರಮ್ಮ, ಯಶೋಧಾ, ಕಾಸಿಂಬಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ADVERTISEMENT

ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕೃಷ್ಣನ ವೇಷಧರಿಸಿದ ಮಕ್ಕಳು, ಭಜನೆ ಮತ್ತು ನೃತ್ಯ ಪ್ರದರ್ಶಿಸಿ ಪ್ರತಿಭೆ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.