ADVERTISEMENT

ಕುಕನೂರು | ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಯುವಕರ ಪಡೆ 

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:23 IST
Last Updated 25 ಫೆಬ್ರುವರಿ 2026, 7:23 IST
ಕುಕನೂರು ತಾಲ್ಲೂಕಿನ ಶಿರೂರು ಗ್ರಾಮದ ಯುವಕರು ಬಸ್‌ ನಿಲ್ದಾಣ ಸ್ವಚ್ಛಗೊಳಿಸುತ್ತಿರುವುದು
ಕುಕನೂರು ತಾಲ್ಲೂಕಿನ ಶಿರೂರು ಗ್ರಾಮದ ಯುವಕರು ಬಸ್‌ ನಿಲ್ದಾಣ ಸ್ವಚ್ಛಗೊಳಿಸುತ್ತಿರುವುದು   

ಕುಕನೂರು: ತಾಲ್ಲೂಕಿನ ಶಿರೂರು ಗ್ರಾಮದ ಯುವಕರ ಪಡೆ ಸ್ವಯಂ ಪ್ರೇರಿತವಾಗಿ ಗ್ರಾಮದ ಬಸ್ ನಿಲ್ದಾಣ ಸ್ವಚ್ಛಗೊಳಿಸಿದೆ.

ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿತ್ತು. ತ್ಯಾಜ್ಯ ಸಾಮಾನ್ಯವಾಗಿತ್ತು. ಯುವಕರು ಅದನ್ನು ಗುಡಿಸಿ ಸ್ವಚ್ಛ ಮಾಡಿದ್ದಾರೆ. 

ಯುವಕರ ಈ ಕಾರ್ಯ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.

ADVERTISEMENT

ಯುವಕರಾದ ಶರಣು ಕುಮಾರ ಮಾದಿನೂರು, ಮಂಜುನಾಥ ವಾಲ್ಮೀಕಿ, ಭೀಮಪ್ಪ ಹುಬ್ಬಳ್ಳಿ, ಮಂಜುನಾಥ ಗದ್ದಿ, ಜಾಕೀರ್ ಪಾಷಾ ಅಂಗಡಿ, ಭೀಮಪ್ಪ ಕಡಗತ್ತಿ, ವೀರೇಶ ಬಂಗಾರಿ, ಆಕಾಶ ಬಂಗಾರಿ, ಮುತ್ತು ತಳವಾರ, ಪ್ರಜ್ವಲ್ ಬೇವಿನಗಿಡ, ವೀರೇಶ ಬಡಿಗೇರ, ಕನಕಪ್ಪ ಮೇಟಿ, ವೀರೇಶ ಮೇಟಿ, ರಾಜಾಸಾಬ್ ಪಿಂಜಾರ್ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.