ADVERTISEMENT

ಕೊಪ್ಪಳ | ಅಧಿಕಾರಿ, ಗುತ್ತಿಗೆದಾರರ ಮೇಲೆ ‘ಲೋಕಾ’ದಾಳಿ

ಇಂದೂ ಮುಂದುವರಿಯಲಿದೆ ದಾಖಲೆಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:09 IST
Last Updated 17 ಸೆಪ್ಟೆಂಬರ್ 2025, 5:09 IST
<div class="paragraphs"><p>ಕೊಪ್ಪಳದ ನಗರಸಭೆಯಲ್ಲಿ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು.</p></div>

ಕೊಪ್ಪಳದ ನಗರಸಭೆಯಲ್ಲಿ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು.

   

ಕೊಪ್ಪಳ: ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಸಿದ ಮತ್ತು ಹಲವು ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದರಿಂದ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಇಲ್ಲಿನ ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌ ಸಹೋದರ ಶಕೀಲ್‌ ಪಟೇಲ್‌ ಹಾಗೂ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಕಳೆದ ವರ್ಷ ನೂರಾರು ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಭ್ರಷ್ಟಾಚಾರ ಆಗಿದೆ ಎನ್ನುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಲೋಕಾಯುಕ್ತಕ್ಕೂ ಕೆಲವರು ದೂರು ಸಲ್ಲಿಸಿದ್ದರು. ಮಂಗಳವಾರ ಬೆಳಿಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳ ಒಂದು ತಂಡ ನಗರಸಭೆ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ನಗರಸಭೆಯಲ್ಲಿಯೂ ದಾಖಲೆ ಪರಿಶೀಲಿಸಿದರು.

ADVERTISEMENT

ಇನ್ನುಳಿದ ತಂಡಗಳು ನಗರಸಭೆಯ ಜೆ.ಇ. ಸೋಮಲಿಂಗಪ್ಪ ಮನೆಯಿರುವ ಇಲ್ಲಿನ ಶಿವಗಂಗಾ ನಗರ, ಆರ್‌.ಐ. ಉಜ್ವಲ್‌ ಹಾಗೂ ಗುತ್ತಿಗೆದಾರ ಪ್ರವೀಣ್ ಚಂದಾರಿ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿದವು.  ಸೋಮಲಿಂಗಪ್ಪ ಮನೆಯಲ್ಲಿ ಮಧ್ಯಾಹ್ನ ದಾಖಲೆಗಳ ಪರಿಶೀಲನೆ
ಪೂರ್ಣಗೊಂಡಿತು.

ಬೆಳಿಗಿನ ಜಾವವೇ ಅಧಿಕಾರಿಗಳು ನಗರಸಭೆ ಕಚೇರಿ ಮತ್ತು ಮನೆಗಳಿಗೆ ತೆರಳಿದರು. ಇದ್ದಲ್ಲಿಯೇ ಉಪಾಹಾರ, ಊಟ ತರಿಸಿಕೊಂಡು ದಾಖಲೆಗಳನ್ನು ಪರಿಶೀಲಿಸಿದರು. 

‘ದಾಳಿ ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮನೆಯಲ್ಲಿ ಹಲವು ದಾಖಲೆಗಳು ಲಭ್ಯವಾಗಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ. ಕಚೇರಿಯಲ್ಲಿಯೇ ಅಪಾರ ಪ್ರಮಾಣದ ದಾಖಲೆಗಳು ಇದ್ದು, ಅವುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಬುಧವಾರವೂ ತಪಾಸಣೆ ಮುಂದುವರಿಯಲಿದೆ’ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದರು. ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಸಿದ ಮತ್ತು ಹಲವು ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದರಿಂದ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಇಲ್ಲಿನ ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌ ಸಹೋದರ ಶಕೀಲ್‌ ಪಟೇಲ್‌ ಹಾಗೂ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಕಳೆದ ವರ್ಷ ನೂರಾರು ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಭ್ರಷ್ಟಾಚಾರ ಆಗಿದೆ ಎನ್ನುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಲೋಕಾಯುಕ್ತಕ್ಕೂ ಕೆಲವರು ದೂರು ಸಲ್ಲಿಸಿದ್ದರು. ಮಂಗಳವಾರ ಬೆಳಿಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳ ಒಂದು ತಂಡ ನಗರಸಭೆ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ನಗರಸಭೆಯಲ್ಲಿಯೂ ದಾಖಲೆ ಪರಿಶೀಲಿಸಿದರು.

ಇನ್ನುಳಿದ ತಂಡಗಳು ನಗರಸಭೆಯ ಜೆ.ಇ. ಸೋಮಲಿಂಗಪ್ಪ ಮನೆಯಿರುವ ಇಲ್ಲಿನ ಶಿವಗಂಗಾ ನಗರ, ಆರ್‌.ಐ. ಉಜ್ವಲ್‌ ಹಾಗೂ ಗುತ್ತಿಗೆದಾರ ಪ್ರವೀಣ್ ಚಂದಾರಿ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿದವು.  ಸೋಮಲಿಂಗಪ್ಪ ಮನೆಯಲ್ಲಿ ಮಧ್ಯಾಹ್ನ ದಾಖಲೆಗಳ ಪರಿಶೀಲನೆ
ಪೂರ್ಣಗೊಂಡಿತು.

ಬೆಳಿಗಿನ ಜಾವವೇ ಅಧಿಕಾರಿಗಳು ನಗರಸಭೆ ಕಚೇರಿ ಮತ್ತು ಮನೆಗಳಿಗೆ ತೆರಳಿದರು. ಇದ್ದಲ್ಲಿಯೇ ಉಪಾಹಾರ, ಊಟ ತರಿಸಿಕೊಂಡು ದಾಖಲೆಗಳನ್ನು ಪರಿಶೀಲಿಸಿದರು. 

‘ದಾಳಿ ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮನೆಯಲ್ಲಿ ಹಲವು ದಾಖಲೆಗಳು ಲಭ್ಯವಾಗಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ. ಕಚೇರಿಯಲ್ಲಿಯೇ ಅಪಾರ ಪ್ರಮಾಣದ ದಾಖಲೆಗಳು ಇದ್ದು, ಅವುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಬುಧವಾರವೂ ತಪಾಸಣೆ ಮುಂದುವರಿಯಲಿದೆ’ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.