ADVERTISEMENT

ಮಹಾಂತೇಶ, ಮಮತಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 12:32 IST
Last Updated 22 ಜೂನ್ 2022, 12:32 IST
   

ಕೊಪ್ಪಳ: ಕಾವ್ಯದ ಹಸ್ತಪ್ರತಿಗೆ ಕವಿ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣಾರ್ಥ ನೀಡುವ ಪ್ರಶಸ್ತಿಗೆ ಈ ಬಾರಿ ದಾವಣಗೆರೆಯ ಡಾ. ಮಹಾಂತೇಶ ಪಾಟೀಲ ಹಾಗೂ ಹಾಸನ ಜಿಲ್ಲೆಯ ಮಮತಾ ಅರಸೀಕೆರೆ ಆಯ್ಕೆಯಾಗಿದ್ದಾರೆ.

ಮಹಾಂತೇಶ ಅವರ 'ಚಲಿಸುವ ಮೋಡಗಳು' ಮತ್ತು ಮಮತಾ ಅವರ 'ನೀರ ಮೇಲಿನ ಮುಳ್ಳು' ಹಸ್ತಪ್ರತಿಗಳಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ತಲಾ ₹6,000 ನಗದು ಹಾಗೂ ಫಲಕ ಒಳಗೊಂಡಿದೆ.

ಕೊಪ್ಪಳದಲ್ಲಿ ಅ. 16ರಂದು ನಡೆಯುವ 'ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ'ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬಂಡಾಯ ಕವಿ ಅಲ್ಲಮಪ್ರಭು ಬೆಟ್ಟದೂರ ಮತ್ತು ಸಾಹಿತಿ ಎಚ್.ಎಸ್. ಪಾಟೀಲ ಅವರು ತೀರ್ಪುಗಾರರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.