ADVERTISEMENT

ಮಹಾವೀರ ಜಯಂತಿ: ಸರಳ ಆಚರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 12:39 IST
Last Updated 19 ಏಪ್ರಿಲ್ 2021, 12:39 IST
ವರ್ಧಮಾನ ಮಹಾವೀರ
ವರ್ಧಮಾನ ಮಹಾವೀರ   

ಕೊಪ್ಪಳ: ‘ಕೋವಿಡ್‌ ಕಾರಣ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು’ ಎಂದು ಜೈನ ಸಮಾಜದ ಪ್ರಮುಖರು ತಿಳಿಸಿದ್ದಾರೆ.

ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಗುತ್ತದೆ. ಜೈನ ಬಸೀದಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಬಹಿರಂಗ ಧಾರ್ಮಿಕ ಸಭೆ, ಮೆರವಣಿಗೆ ನಡೆಯುವುದಿಲ್ಲ. ಸಮುದಾಯದ ಜನತೆ ಮನೆಯಲ್ಲಿ ದೀಪ ಬೆಳಗಿ, ಮಹಾವೀರರ ಸ್ಮರಣೆ ಮಾಡುವ ಮೂಲಕ ಜಯಂತಿ ಆಚರಣೆ ಮಾಡಬೇಕು ಎಂದು ಸಮಾಜದ ಮುಖಂಡ ಶ್ರೇಣಿಕ್ ಕುಮಾರ್ ಜೈನ್ ಮನವಿ ಮಾಡಿದ್ದಾರೆ.

ಮಹಾವೀರ ಧಾರ್ಮಿಕ ಜೀವನದ ಅಡಿಪಾಯಕ್ಕೆ ಮಾರ್ಗದರ್ಶನ ನೀಡಿದ ಮಹಾನ್ ಪುರುಷೋತ್ತಮ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.