ADVERTISEMENT

ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಮೊಲ: ಅಪಘಾತದಲ್ಲಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 3:18 IST
Last Updated 22 ಸೆಪ್ಟೆಂಬರ್ 2022, 3:18 IST
ಮಾಬುಸಾಬ ದಸ್ತಗಿರಸಾಬ
ಮಾಬುಸಾಬ ದಸ್ತಗಿರಸಾಬ   

ಯಲಬುರ್ಗಾ: ದ್ವಿಚಕ್ರ ವಾಹನ ಚಾಲನೆ ಮಾಡುವಾಗ ರಸ್ತೆ ಮೇಲೆ ಮೊಲ ಅಡ್ಡ ಬಂದ ಕಾರಣ ತಾಲ್ಲೂಕಿನ ಸಂಗನಾಳ ಗ್ರಾಮದ ಹತ್ತಿರ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ. ಮತ್ತೊಬ್ಬರನ್ನು ತೀವ್ರ ಗಾಯವಾಗಿ ಕೊಪ್ಪಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರನ್ನು ಕುಕನೂರಿನ ಮಾಬುಸಾಬ ದಸ್ತಗಿರಸಾಬ ಗುಡಿಹಿಂದಿಲ್ (55) ಎಂದು ಗುರುತಿಸಲಾಗಿದೆ. ಅವರು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಕುಕನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದರು.

ಯಲಬುರ್ಗಾದಿಂದ ಸಂಗನಾಳ ಮಾರ್ಗವಾಗಿ ಕುಕನೂರಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮೊಲ ಅಡ್ಡಬಂದು ಗಾಲಿಯಲ್ಲಿ ಸಿಲುಕಿಕೊಂಡಿದೆ. ನಿಯಂತ್ರಣತಪ್ಪಿ ಸ್ಕೂಟಿ ಮುಗಿಸಿಬಿದ್ದಿದೆ.

ADVERTISEMENT

ಸವಾರರು ಇಬ್ಬರು ನೆಲಕ್ಕೆ ಬಿದ್ದಾಗ ತಲೆಗೆ ಬಲವಾದ ಪಟ್ಟುಬಿದ್ದ ಪರಿಣಾಮ ಒಬ್ಬರು ಮೃತಪಟ್ಟರೆ, ಮತ್ತೊಬ್ಬ ಸವಾರ ಚಂದ್ರಶೇಖರ ಎಂಬುವರಿಗೂ ಬಲವಾದ ಗಾಯವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.