ADVERTISEMENT

ಜೋಡೆತ್ತುಗಳ ಮೂರ್ತಿಗಳಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 4:50 IST
Last Updated 2 ಜುಲೈ 2019, 4:50 IST
ಯಲಬುರ್ಗಾ ಪಟ್ಟಣದ ಕಲಾವಿದ ವಿರೂಪಾಕ್ಷಪ್ಪ ಬಡಿಗೇರ ಮಣ್ಣೆತ್ತುಗಳ ಮೂರ್ತಿ ತಯಾರಿಸುತ್ತಿರುವುದು
ಯಲಬುರ್ಗಾ ಪಟ್ಟಣದ ಕಲಾವಿದ ವಿರೂಪಾಕ್ಷಪ್ಪ ಬಡಿಗೇರ ಮಣ್ಣೆತ್ತುಗಳ ಮೂರ್ತಿ ತಯಾರಿಸುತ್ತಿರುವುದು   

ಯಲಬುರ್ಗಾ: ಗ್ರಾಮೀಣ ಭಾಗದ ಜನರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ.

ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಮೂಲಕ ಭೂತಾಯಿಗೆ ಮೊದಲ ಗೌರವ ಸಲ್ಲಿಸಲಾಗುತ್ತದೆ.

ಈ ಹಬ್ಬಕ್ಕೆ ಸ್ಥಳೀಯ ಕುಂಬಾರ ಹಾಗೂ ಬಡಿಗೇರ ಕುಟುಂಬಗಳು ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತವೆ.

ADVERTISEMENT

ಕಲಾವಿದ ವಿರೂಪಾಕ್ಷಪ್ಪ ಬಡಿಗೇರ ಮಣ್ಣೆತ್ತಿನ ಮೂರ್ತಿಗಳನ್ನು ತಯಾರಿಸಿದ್ದು, ಜೋಡಿ ಎತ್ತುಗಳಿಗೆ ₹20ರಿಂದ 40 ಗೆ ಮಾರಾಟ ಮಾಡಲಾಗುತ್ತದೆ.

ಹಬ್ಬದ ಒಂದು ತಿಂಗಳ ಮುಂಚಿತವಾಗಿಯೇ ಮಣ್ಣನ್ನು ತಂದು ತಯಾರಿಸಿಟ್ಟುಕೊಳ್ಳುವ ಇವರು ಕಳೆದ 20 ವರ್ಷಗಳಿಂದಲೂ ಈ ಕಾಯಕದಲ್ಲಿ ನಿರತರಾಗಿದ್ದಾರೆ.

ನಿರೀಕ್ಷಿಸಿದಷ್ಟು ಲಾಭ ಸಿಗದಿದ್ದರೂ ಪೂರ್ವಜರ ಕಾಲದಿಂದಲೂ ಮಾಡಿಕೊಂಡು ಬಂದಿರುವ ಕಲೆ ಮತ್ತು ಕಸುಬು ಕೈಬಿಡಬಾರದೆಂದು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ವಿರೂಪಾಕ್ಷಪ್ಪ ಹೇಳುತ್ತಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.