ADVERTISEMENT

ಮುಕುಂದರಾವ್‌ ಪರ ಶಾಸಕ ದಢೇಸೂಗೂರು ಬ್ಯಾಟಿಂಗ್‌

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 5:40 IST
Last Updated 24 ನವೆಂಬರ್ 2022, 5:40 IST
ಬಸವರಾಜ ದಢೇಸಗೂರು
ಬಸವರಾಜ ದಢೇಸಗೂರು   

ಮುನಿರಾಬಾದ್‌ (ಕೊಪ್ಪಳ): ‘ಕಡಿಮೆ ಅಂತರದಲ್ಲಿ ಸೋಲು ಕಂಡರೂ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಕಾಂಗ್ರೆಸ್‌ನ ಮುಕುಂದರಾವ್ ಭವಾನಿಮಠ ಟಿಕೆಟ್‌ ಕೇಳಿದ್ದರಲ್ಲಿ ತಪ್ಪೇನೂ ಇಲ್ಲ’ ಎಂದು ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಹೇಳಿದರು.

ಇಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಇದೆ. 2008ರ ಚುನಾವಣೆಯಲ್ಲಿ ಭವಾನಿಮಠ ಬಹಳಷ್ಟು ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಈಗಲೂ ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಕಾರ್ಯಕರ್ತರಲ್ಲಿ ಪ್ರೀತಿ ಹಾಗೂ ವಿಶ್ವಾಸ ಉಳಿಸಿಕೊಂಡಿದ್ದಾರೆ. ಅವರಿಗೂ ಟಿಕೆಟ್‌ ಕೊಟ್ಟರೆ ತಪ್ಪೇನಿಲ್ಲ’ ಎಂದರು.

‘ಸ್ನೇಹಿತ ಭವಾನಿಮಠ ಅಥವಾ ಮಾಜಿ ಸಚಿವ ಶಿವರಾಜ ತಂಗಡಗಿ ಯಾರಿಗೇ ಟಿಕೆಟ್‌ ಕೊಟ್ಟರೂ ನಾವು ಕನಕಗಿರಿ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಹಿಂದಿನ ಚುನಾವಣೆಯಲ್ಲಿ ಬಹಳಷ್ಟು ಮತಗಳ ಅಂತರದಲ್ಲಿ ಸೋತವರಿಗಿಂತ ಕಡಿಮೆ ಮತಗಳ ಅಂತರದಲ್ಲಿ ಟಿಕೆಟ್‌ ಕೊಡುವುದು ಉತ್ತಮ’ ಎಂದು ಭವಾನಿಮಠ ಪರ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಭವಾನಿಮಠ ಮೂಲಕ ನೀವೇ ಅರ್ಜಿ ಹಾಕಿಸಿದ್ದೀರಾ ಎನ್ನುವ ಪ್ರಶ್ನೆಗೆ ’ನಾನು ಆ ಕೆಲಸ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.