ADVERTISEMENT

ಮುಳುಬಾಗಿಲು ಶ್ರೀಗಳಿಂದ ಪ್ರವಚನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 3:58 IST
Last Updated 1 ಮಾರ್ಚ್ 2021, 3:58 IST
ಕೇಶವನಿಧಿ ತೀರ್ಥ ಸ್ವಾಮೀಜಿ
ಕೇಶವನಿಧಿ ತೀರ್ಥ ಸ್ವಾಮೀಜಿ   

ಕುಷ್ಟಗಿ: ಮುಳುಬಾಗಿಲಿನ ಶ್ರೀಪಾದರಾಜ ಮಠದ ಕೇಶವನಿಧಿತೀರ್ಥ ಸ್ವಾಮೀಜಿ ಭಾನುವಾರ ಸಂಜೆ ಪಟ್ಟಣಕ್ಕೆ ಆಗಮಿಸಲಿದರು. ಇಲ್ಲಿಯ ಬ್ರಾಹ್ಮಣ ಸಮುದಾಯದವರು ಬರಮಾಡಿಕೊಂಡರು.

ನಂತರ ರಾಘವೇಂದ್ರಸ್ವಾಮಿ ಮಠದಲ್ಲಿ ಸ್ವಾಮೀಜಿ ಅವರಿಂದ ಪ್ರವಚನ ಕಾರ್ಯಕ್ರಮ ನೆರವೇರಿತು. ನಂತರ ಶ್ರೀಗಳಿಂದ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಪಂಡಿತರು, ಬ್ರಾಹ್ಮಣ ಸಮುದಾಯದ ಅನೇಕ ಪ್ರಮುಖರು ಉಪಸ್ಥಿತರಿದ್ದರು.

‘ಮಾ.1 ರಂದು ಸ್ವಾಮೀಜಿ ಅವರಿಂದ ಸಂಸ್ಥಾನ ಪೂಜೆ ನೆರವೇರುವುದು, ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.