ADVERTISEMENT

ಕೊಪ್ಪಳ | ಕಾಲು ಮುರಿದರೂ ಉತ್ಸಾಹದಿಂದ ಪರೀಕ್ಷೆ ಬರೆದ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 13:53 IST
Last Updated 9 ಮಾರ್ಚ್ 2023, 13:53 IST
ಪಿಯುಸಿ ಪರೀಕ್ಷೆ ಬರೆಯಲು ಟಂಟಂ ಆಟೊದಲ್ಲಿ ಕಾಲು ಚಾಚಿಕೊಂಡೇ ಬಂದ ಚಂದ್ರಶೇಖರ ಮಣೆದಾಳ
ಪಿಯುಸಿ ಪರೀಕ್ಷೆ ಬರೆಯಲು ಟಂಟಂ ಆಟೊದಲ್ಲಿ ಕಾಲು ಚಾಚಿಕೊಂಡೇ ಬಂದ ಚಂದ್ರಶೇಖರ ಮಣೆದಾಳ   

ತಾವರಗೇರಾ (ಕೊಪ್ಪಳ ಜಿಲ್ಲೆ): ಅಪಘಾತದಲ್ಲಿ ಎಡಗಾಲು ಮುರಿದುಕೊಂಡ ವಿದ್ಯಾರ್ಥಿ ಚಂದ್ರಶೇಖರ ಮೆಣದಾಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯ ಪರೀಕ್ಷೆ ಬರೆದು ಗಮನ ಸೆಳೆದರು.

ತಾಲ್ಲೂಕಿನ ನಂದಾಪೂರ ಗ್ರಾಮದ ಚಂದ್ರಶೇಖರಗೆ ಕಾಲು ಮಡಚಲು ಬಾರದ ಸ್ಥಿತಿಯಿದೆ. ಟಂಟಂ ವಾಹನದಲ್ಲಿ ಬೆಡ್ ಮತ್ತು ದಿಂಬು ತೆಗೆದುಕೊಂಡು ಕಾಲು ಚಾಚಿಕೊಂಡು ಕೇಂದ್ರಕ್ಕೆ ಬಂದರು. ಸಹಾಯಕರೊಂದಿಗೆ ಪರೀಕ್ಷಾ ಕೊಠಡಿ ತನಕ ಹೋಗಿ ಹಾಸಿಗೆ ಮೇಲೆಯೇ ತಲೆದಿಂಬು ಇಟ್ಟುಕೊಂಡು ಪರೀಕ್ಷೆ ಬರೆದಿದ್ದು ವಿಶೇಷ.

ನಂತರ ಮಾತನಾಡಿದ ಚಂದ್ರಶೇಖರ ‘ಪ್ರತಿ ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಮಹತ್ವದ ಘಟ್ಟವಾಗಿದ್ದು, ಅನಿರೀಕ್ಷಿತವಾಗಿ ಅಪಘಾತವಾಗಿದೆ. ಇದೊಂದೇ ಕಾರಣಕ್ಕೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಳ್ಳುವುದು ಇಷ್ಟವಿರಲಿಲ್ಲ’ ಎಂದರು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಸ್‌.ಎಸ್‌. ಪೋರೆ, ಸಹ ಮುಖ್ಯ ಅಧೀಕ್ಷಕ ಕೊಟ್ರೇಶಪ್ಪ , ಜಾಗೃತ ದಳದ ಸಿಬ್ಬಂದಿ ವಿದ್ಯಾರ್ಥಿನಿಗೆ ನೆರವಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.