ಅಳವಂಡಿ: ಸಮಾಜೋದ್ಧಾರ ಹಾಗೂ ಸರ್ವರಿಗೂ ಸಮಾನತೆ ಸಾರಿದ ಮಹಾನ್ ಗ್ರಂಥ ನಮ್ಮ ದೇಶದ ಸಂವಿಧಾನ ಎಂದು ಶಿಕ್ಷಕ ಅಲಿ ಕೆ.ಎಂ. ತಿಳಿಸಿದರು.
ಗ್ರಾಮದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಗ್ರಾಮಕ್ಕೆ ಶನಿವಾರ ಆಗಮಿಸಿದ ಸಂವಿಧಾನ ಜಾಗೃತಿ ವಾಹನಕ್ಕೆ ಅದ್ದೂರಿ ಸ್ವಾಗತ ಕೋರಿ ಮಾತನಾಡಿದರು.
ಕವಲೂರಿನಿಂದ ಬಂದ ವಾಹನಕ್ಕೆ ಮಹಿಳೆಯರ ಕಳಸ, ಕುಂಭ ಹಾಗೂ ಕಸ್ತೂರಬಾ ಗಾಂಧಿ ಬಾಲಕಿಯರ ಶಾಲೆಯ ಮಕ್ಕಳಿಂದ ಡೊಳ್ಳಿನ ಮೇಳ ಹಾಗೂ ನೂರಾರು ಶಾಲೆಯ ಮಕ್ಕಳು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಅಂಗನವಾಡಿ, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಮುಂತಾದ ಇಲಾಖೆಗಳು, ಗ್ರಾಮಸ್ಥರು ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ ಕೋರಿದರು.
ಗ್ರಾ.ಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಅಂಗನವಾಡಿ ಮೇಲ್ವಿಚಾರಕಿ ರೆಹಮತ್ಬೀ, ಸಿಆರ್ಪಿ ವಿಜಯಕುಮಾರ ಟಿಕಾರೆ, ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸಾಹೇಖಾ ಅಹ್ಮದಿ, ಸಿಬ್ಬಂದಿಯಾದ ಬಸವರಾಜ, ಶರಣಪ್ಪ, ಇಸ್ಮಾಯಿಲ್, ಮಲ್ಲಿಕಾರ್ಜುನ, ಅಬ್ದುಲ್, ಗ್ರಾ.ಪಂ ಸದಸ್ಯರು, ವಿವಿಧ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.