
ಹನುಮಸಾಗರ: ವಿವಿಧಡೆ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.
ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಧ್ವಜಾರೋಹಣ ನೆರವೇರಿಸಿದರು. ಕರಿಸಿದ್ಧಪ್ಪ ಕುಷ್ಟಗಿ, ಬಸವರಾಜ ಬಾಚಲಾಪುರ, ಬಸವರಾಜ ಹಳ್ಳೂರ, ಮಹಾಂತೇಶ, ವಿಶ್ವನಾಥ ನಾಗುರ, ವಿಶ್ವನಾಥ ಕನ್ನೂರ, ಅಂದಾನಯ್ಯ ಸೊಪ್ಪಿಮಠ, ಸಿದ್ದಯ್ಯ ಬಾಳಿಹಳ್ಳಮಠ, ಮಹಾಂತಯ್ಯ ಕೋಮಾರಿ, ಅಬ್ದುಲ್ ಕರೀಂ ವಂಟ್ಟಳ್ಳಿ, ಇಕ್ಬಾಲ್ ಡಾಲಾಯತ, ರಾಜ್ ಮಹಮ್ಮದ ಕಲಾಲಬಂಡಿ, ಪ್ರಶಾಂತ ಗಡಾದ, ಸೂಚಪ್ಪ ದೇವರಮನಿ, ಸಿದ್ದಪ್ಪ ಹಕ್ಕಿ, ಶೇಖಪ್ಪ ಸಜ್ಜನ, ಶಂಕರ ಪಾಟೀಲ, ಮಂಜುನಾಥ ಹುಲ್ಲೂರು, ಶಿವಪ್ಪ ಕಂಪ್ಲಿ, ಮುತ್ತು ಪತ್ತಾರ, ರಾಚಪ್ಪ ಚಿನಿವಾಲರ, ಬಸಪ್ಪ ದೋಟಿಹಾಳ ಇದ್ದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಧನಂಜಯ್ ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಭೀಮಪ್ಪ ಗೊಲ್ಲರ ಧ್ವಜಾರೋಹಣ ನೆರವೇರಿಸಿದರು. ಕೆಪಿಎಸ್ಸಿ ಉಪಾಧ್ಯಕ್ಷ ಬಸವರಾಜ್ ದ್ಯಾವಣ್ಣವರ ಮಾತನಾಡಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕ ಎಚ್.ಎಚ್. ಇಲಕಲ್ ಧ್ವಜಾರೋಹಣ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.