ADVERTISEMENT

ಬಣವೆಗಳಿಗೆ ಬೆಂಕಿ: ನಷ್ಟ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 14:32 IST
Last Updated 26 ಡಿಸೆಂಬರ್ 2020, 14:32 IST
ಕಾರಟಗಿಯ ಸಿದ್ದಲಿಂಗ ನಗರದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹುಲ್ಲಿನ ಬಣಿವೆ ಭಸ್ಮವಾಗಿದೆ
ಕಾರಟಗಿಯ ಸಿದ್ದಲಿಂಗ ನಗರದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹುಲ್ಲಿನ ಬಣಿವೆ ಭಸ್ಮವಾಗಿದೆ   

ಕಾರಟಗಿ: ಇಲ್ಲಿನ ಸಿದ್ದಲಿಂಗ ನಗರದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹುಲ್ಲಿನ ಬಣವೆ ಭಸ್ಮವಾಗಿದೆ.

ಬಣವೆ ಬಸವರಾಜ ಶಂಕ್ರಪ್ಪ ಎಂಬುವವರಿಗೆ ಸೇರಿದ್ದು, ₹30 ಸಾವಿರ ನಷ್ಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರು.

ADVERTISEMENT

ತಾಲ್ಲೂಕಿನ ಹುಳ್ಕಿಹಾಳಕ್ಯಾಂಪ್‌ನಲ್ಲಿ ಹುಲ್ಲಿನ ಬಣವೆಗೆ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ₹1.25 ಲಕ್ಷ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಬಣವೆ ಕೋಡಿ ಸತ್ಯನಾರಾಯಣ ಮಾರಯ್ಯ ಎಂಬುವವರಿಗೆ ಸೇರಿದ್ದಾಗಿದೆ.

ಅಗ್ನಿಶಾಮಕ ಸಿಬ್ಬಂದಿ ತಿಮ್ಮಾರಡ್ಡಿ, ಸುರೇಶಕುಮಾರ, ವಿನೋದ ಚಳಿಗೇರಿ, ಅಕ್ಬರಸಾಬ, ಸೋಮನಗೌಡ, ವೈ. ಪರಸಪ್ಪ ಹಾಗೂ ಚಂದ್ರಶೇಖರ ಬೆಂಕಿ ನಂದಿಸಲು ಪ್ರಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.