ADVERTISEMENT

ಮುರಡಿ ತಾಂಡಾ: ಮೇವಿನ ಬಣವೆ ಭಸ್ಮ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 14:36 IST
Last Updated 15 ಫೆಬ್ರುವರಿ 2021, 14:36 IST
ಯಲಬುರ್ಗಾ ತಾಲ್ಲೂಕು ಮುರಡಿ ತಾಂಡಾದ ಹೊರ ವಲಯದಲ್ಲಿ ಬಣವೆಗೆ ಬೆಂಕಿ ಹೊತ್ತಿಕೊಂಡಿದೆ
ಯಲಬುರ್ಗಾ ತಾಲ್ಲೂಕು ಮುರಡಿ ತಾಂಡಾದ ಹೊರ ವಲಯದಲ್ಲಿ ಬಣವೆಗೆ ಬೆಂಕಿ ಹೊತ್ತಿಕೊಂಡಿದೆ   

ಮುರಡಿ (ಯಲಬುರ್ಗಾ): ತಾಲ್ಲೂಕಿನ ಮುರಡಿ ತಾಂಡಾದ ಹೊರ ವಲಯದಲ್ಲಿಭಾನುವಾರ ಮಧ್ಯಾಹ್ನ ನೇಮಪ್ಪ ಯಮನಪ್ಪ ಕಳ್ಳೊಳ್ಳಿ ಎಂಬುವವರಿಗೆ ಸೇರಿದ ಬಣವೆ ಬೆಂಕಿಗೆ ಆಹುತಿಯಾಗಿದೆ.

‘ಕಿಡಿಗೇಡಿಗಳು ಮೇವಿನ ಬಣವೆಗೆ ಬೆಂಕಿ ಹಚ್ಚಿದ್ದಾರೆ. ₹1 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮೇವು ಸುಟ್ಟಿದೆ’ ಎಂದು ರೈತ ತಿಳಿಸಿದರು.

‘ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುವಷ್ಟರಲ್ಲಿ ಮೇವು ಬಹುತೇಕ ಸುಟ್ಟು ಹೋಯಿತು. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಲಿದೆ. ಸರ್ಕಾರ ಪರಿಹಾರ ನೀಡಬೇಕು’ ಎಂದು ನೇಮಪ್ಪ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.