ADVERTISEMENT

ತಹಶೀಲ್ದಾರ್ ಲಂಚ ಪಡೆದ ವಿಡಿಯೊ ವೈರಲ್

ಷೋಕಾಸ್‌ ನೋಟಿಸ್‌ ಜಾರಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 20:53 IST
Last Updated 18 ಡಿಸೆಂಬರ್ 2020, 20:53 IST

ಗಂಗಾವತಿ: ಮರಳು ಅಕ್ರಮ ಸಾಗಾಟಕ್ಕೆ ನೆರವಾಗಲು ಇಲ್ಲಿನ ತಹಶೀಲ್ದಾರ್‌ಲಂಚ ಪಡೆದಿದ್ದಾರೆ ಎನ್ನಲಾದ ವಿಡಿಯೊ ವೈರಲ್‌ ಆಗಿದೆ.

‘ಗಂಗಾವತಿ ತಹಶೀಲ್ದಾರ್‌ ಎಂ. ರೇಣುಕಾ ಅವರುಲಂಚ ಪಡೆದಿದ್ದಾರೆ ಎನ್ನಲಾದ ಆಡಿಯೊ, ವಿಡಿಯೊ ವೈರಲ್‌ ಆಗಿರುವುದು ನನ್ನ ಗಮನಕ್ಕೆ ಬಂದಿದೆ.ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು. ತಹಶೀಲ್ದಾರರಿಗೆ ಷೋಕಾಸ್‌ ನೋಟಿಸ್‌ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಪ್ರತಿಕ್ರಿಯಿಸಿದ್ದಾರೆ.

ಪ್ರತಿ ಟ್ರ್ಯಾಕ್ಟರ್‌ಗೆ ತಿಂಗಳಿಗೆ ₹10 ಸಾವಿರ ಕೊಡಬೇಕು ಎಂದು ವ್ಯವಹಾರ ಕುದರಿಸುತ್ತಿರುವುದು.ಮಧ್ಯವರ್ತಿಗಳಿಂದ ₹5 ಸಾವಿರ ಲಂಚ ಪಡೆಯುತ್ತಿರುವುದು ಆಡಿಯೊ ಮತ್ತು ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.