ADVERTISEMENT

ಕೊಪ್ಪಳ| ಗ್ರಹಣ: ದೇಗುಲ ಬಂದ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 13:42 IST
Last Updated 24 ಡಿಸೆಂಬರ್ 2019, 13:42 IST

ಕೊಪ್ಪಳ: ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಾಲ್ಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಅಮವಾಸ್ಯೆ ನಿಮಿತ್ತ ಹಾಗೂ ಕಂಕಣಾಕೃತಿ ಸೂರ್ಯಗ್ರಹಣ ಪ್ರಯುಕ್ತ ಡಿ. 25 ರಂದು ಸಂಜೆ 6 ಗಂಟೆಯಿಂದ ಡಿ.26ರ ಮಧ್ಯಾಹ್ನ 12-30 ರವರೆಗೆ ಶ್ರೀದೇವಿ ದರ್ಶನ ಇರುವುದಿಲ್ಲ.ಡಿ. 25 ರಂದು ಸಂಜೆ 6ಕ್ಕೆ ವೇದಾರಂಭದೊಂದಿಗೆ ದೇವಸ್ಥಾನವನ್ನು ಬಂದ್ ಮಾಡಲಾಗುವುದು.

26 ರಂದು ಅಮವಾಸ್ಯೆ ಇರುವುದರಿಂದ ಮಧ್ಯಾಹ್ನ ಆರಂಭವಾಗಲಿದೆ. ಭಕ್ತರು ಗಮನಿಸಬೇಕು. ಇದಕ್ಕೆ ಸಹಕರಿಸಬೇಕು ಎಂದು ಹುಲಿಗೆಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT