ADVERTISEMENT

ಸಾಣಾಪುರ: ಬೀಗ ಮುರಿದು ಕಳವು

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 3:25 IST
Last Updated 6 ಜುಲೈ 2021, 3:25 IST

ಸಾಣಾಪುರ (ಗಂಗಾವತಿ): ತಾಲ್ಲೂಕಿನ ಸಾಣಾಪುರ ಗ್ರಾಮದಲ್ಲಿ ಕಳ್ಳರು ಭಾನುವಾರ ಮಧ್ಯರಾತ್ರಿ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಚಿರಂಜೀವಿರಾಮ ಕೋಟಯ್ಯ ಎಂಬುವರಿಗೆ ಈ ಮನೆ ಸೇರಿದ್ದು,ವಿರುಪಾಪುರ ಗಡ್ಡೆಯ ಜಮೀನಿನಲ್ಲಿಯೇ ತರಕಾರಿಬೆಳೆ ಕಾಯಲುಗುಡಿಸಲು ಹಾಕಿಕೊಂಡು ಅಲ್ಲಿಯೇ ವಾಸವಾಗಿದ್ದರು. ಸೋಮವಾರ ಬೆಳಿಗ್ಗೆ ಮನೆಗೆ ಬಂದಾಗ ಕಳ್ಳತನವಾಗಿರುವುದು ತಿಳಿದಿದೆ.

ಮನೆಯಲ್ಲಿದ್ದ 150 ಗ್ರಾಂ ಬಂಗಾರ, ₹3 ಲಕ್ಷ ಕಳವು ಆಗಿದೆ ರಾಮು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪಿ.ಎಸ್.ಐ ದೊಡ್ಡಪ್ಪ ದೇಸಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT