ಸಾಣಾಪುರ (ಗಂಗಾವತಿ): ತಾಲ್ಲೂಕಿನ ಸಾಣಾಪುರ ಗ್ರಾಮದಲ್ಲಿ ಕಳ್ಳರು ಭಾನುವಾರ ಮಧ್ಯರಾತ್ರಿ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಚಿರಂಜೀವಿರಾಮ ಕೋಟಯ್ಯ ಎಂಬುವರಿಗೆ ಈ ಮನೆ ಸೇರಿದ್ದು,ವಿರುಪಾಪುರ ಗಡ್ಡೆಯ ಜಮೀನಿನಲ್ಲಿಯೇ ತರಕಾರಿಬೆಳೆ ಕಾಯಲುಗುಡಿಸಲು ಹಾಕಿಕೊಂಡು ಅಲ್ಲಿಯೇ ವಾಸವಾಗಿದ್ದರು. ಸೋಮವಾರ ಬೆಳಿಗ್ಗೆ ಮನೆಗೆ ಬಂದಾಗ ಕಳ್ಳತನವಾಗಿರುವುದು ತಿಳಿದಿದೆ.
ಮನೆಯಲ್ಲಿದ್ದ 150 ಗ್ರಾಂ ಬಂಗಾರ, ₹3 ಲಕ್ಷ ಕಳವು ಆಗಿದೆ ರಾಮು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪಿ.ಎಸ್.ಐ ದೊಡ್ಡಪ್ಪ ದೇಸಾಯಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.