ADVERTISEMENT

64 ಸಾಲಿನ ಕಲ್ಲಿನ‌‌‌ ಮಂಟಪ‌ ಮುಳುಗಡೆ

ಸಾಣಾಪುರ: ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ನೀರು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 5:50 IST
Last Updated 19 ಆಗಸ್ಟ್ 2025, 5:50 IST
ಆನೆಗೊಂದಿ ಗ್ರಾಮದಲ್ಲಿನ ಚಿಂತಾಮಣಿ ಬಳಿಯ ಮಂಟಪ ಜಲಾವೃತವಾಗಿರುವುದು
ಆನೆಗೊಂದಿ ಗ್ರಾಮದಲ್ಲಿನ ಚಿಂತಾಮಣಿ ಬಳಿಯ ಮಂಟಪ ಜಲಾವೃತವಾಗಿರುವುದು   

ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿಗೆ ಸೋಮವಾರ ಅಪಾರ ಪ್ರಮಾಣದ ನೀರು ಬಿಡಲಾಗಿದೆ. ಇದರಿಂದಾಗಿ ಆನೆಗೊಂದಿ ಗ್ರಾಮದಲ್ಲಿನ 64 ಸಾಲಿನ ಕಲ್ಲಿನ ಮಂಟಪ, ಚಿಂತಾಮಣಿ ‌ಬಳಿಯ ಮಂಟಪ ಜಲಾವೃತವಾಗಿವೆ.

ತುಂಗಾಭದ್ರ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ ಕಾರಣ ನದಿಗೆ 80 ರಿಂದ 1.15 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಸಾಣಾಪುರ, ಹನುಮನಹಳ್ಳಿ, ಚಿಕ್ಕಜಂತಕಲ್ ಭಾಗದ ಕೆಲ ಭತ್ತ ಮತ್ತು ಬಾಳೆ ತೋಟಗಳಿಗೆ ನೀರು ನು‌ಗ್ಗಿದೆ.

ನೀರು ಬಿಡುಗಡೆಯಿಂದ ನದಿಯಲ್ಲಿ ನೀರಿನ ರಭಸ, ಪ್ರಕೃತಿಯ ರಮಣೀಯ ನೋಟ ದೂರದಿಂದ ಕಣ್ತುಂಬಿಕೊಳ್ಳು‌ವು‌ದನ್ನು ಬಿಟ್ಟು ಯುವಜನರು ನದಿಪಾತ್ರಕ್ಕೆ ತೆರಳಿ ಸೆಲ್ಫಿ ತೆಗೆದುಕೊಳ್ಳಲು ಇಳಿದು ಪ್ರಾಣದ ಜೊತೆ ಚೆಲ್ಲಾಟವಾಡುತ್ತಾರೆ.

ADVERTISEMENT

ರಜೆಯ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ತಾಲ್ಲೂಕಿನ ಸಾಣಾಪುರ ಗ್ರಾಮದ ಜಲಪಾತ, ಸಾಣಾಪುರ ಕೆರೆ, ಖಾಸಗಿ ರೆಸಾರ್ಟ್ ಹಿಂಬದಿಯ ನದಿಪಾತ್ರ, ಚಿಂತಾಮಣಿ ಬಳಿ ನೀರಿಗೆ ಇಳಿದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ.

ಸಾಣಾಪುರ ಗ್ರಾಮದ ಜಲಪಾತ, ಕೆರೆಯಲ್ಲಿ ಈಜಾಡಲು ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ತೆರಳಿ ಕಾಲು ಜಾರಿ ಬಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದಾಗ ಮಾತ್ರ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಗ್ರಾ.ಪಂ ಸಿಬ್ಬಂದಿ ತುಸು ಭದ್ರತೆ ಒದಗಿಸುತ್ತಾರೆ. ದಿನ ಕಳೆದಂತೆ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ.

ಕಳೆದ ತಿಂಗಳು ಗಂಗಾವತಿಯ ಸಿದ್ದಿಕೇರಿ ಬಳಿನ ತುಂಗಭದ್ರಾ ಎಡದಂಡೆ ಕಾಲುವೆಗೆ ಈಜಲು ತೆರಳಿ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಬಾಲಕಿಯೊಬ್ಬರು ನೀರಿನ ಪೈಪ್ ಮೇಲೆ ನಡೆಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಸದ್ಯ ತಾಲ್ಲೂಕಿನಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿವೆ. ನದಿಪಾತ್ರದಲ್ಲಿ ಈವರೆಗೂ ಭದ್ರತೆಗೆ ಕ್ರಮ ಕೈಗೊಳ್ಳುತ್ತಿಲ್ಲ.

ತಾಲ್ಲೂಕಿನ ಹನುಮನಹಳ್ಳಿ, ಪಂಪಾಸರೋವರ, ಆನೆಗೊಂದಿ ತಳವಾರಘಟ್ಟ, ಚಿಂತಾಮಣಿ, ನವಬೃಂದಾವನಕ್ಕೆ ತೆರಳುವ ಸ್ಥಳ, ದೇವಘಾಟ್ ಬಳಿಯ ನದಿಪಾತ್ರದಲ್ಲಿ ಯುವಕರು ಸೆಲ್ಫಿ ತೆಗೆದುಕೊಳ್ಳುವುದು, ಮೀನು ಹಿಡಿಯುವುದನ್ನು ಮಾಡುತ್ತಾರೆ. ಅವರಿಗೆ ಎಚ್ಚರಿಕೆ ನೀಡುವ ಕೆಲಸ ಮಾತ್ರ ಪ್ರಾಮಾಣಿಕವಾಗಿ ನಡೆಯುತ್ತಿಲ್ಲ. 

ಆನೆಗೊಂದಿ ಗ್ರಾಮದಲ್ಲಿನ 64 ಸಾಲಿನ ಕಲ್ಲಿನ ಮಂಟಪ ಮುಳುಗಡೆ ಹಂತ ತಲುಪಿರುವುದು
ಸಾಣಾಪುರ ಗ್ರಾಮದ ಜಲಪಾತದ ಬಳಿಯ ನದಿಯ ಬಂಡೆಯ ಮೇಲೆ ಜನ ಕುಳಿತಿರುವುದು
ಕಂಪ್ಲಿ-ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿರುವುದು
ಸಂಪರ್ಕ ಕಡಿತ
ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಇದರಿಂದ ವಿರು ಪಾಪುರಗಡ್ಡೆ ನವ ವೃಂದಾವನ 64 ಸಾಲಿನ ಕಲ್ಲಿನ ಮಂಟಪ ಜಲಾವೃತವಾಗಿವೆ. ತಳವಾರಗಟ್ಟದಿಂದ ಹಂಪಿಗೆ ತೆರಳುವ ಜಲಮಾರ್ಗ ಸಂಪೂರ್ಣ ಕಡಿತವಾಗಿದೆ. ಕಂಪ್ಲಿ-ಗಂಗಾವತಿ ಮಾರ್ಗದ ಸಂಪರ್ಕ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೊಸಪೇಟೆಗೆ ತೆರಳುವ ವಾಹನಗಳು ಕಡೆಬಾಗಿಲು ಸೇತುವೆ ಮೇಲೆ ಸಂಚರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.