
ಪ್ರಜಾವಾಣಿ ವಾರ್ತೆ
ಕನಕಗಿರಿ: ಜನ್ಮ ದಿನಾಚರಣೆಯ ಸಮಯದಲ್ಲಿ ಕೇಕ್ ಕಟ್ ಮಾಡಲು ಕಬ್ಬಿಣದ ತಲ್ವಾರ್ ಬಳಸಿ ಶಸ್ತ್ರಾಸ್ತ್ರ ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಸಮೀಪದ ಯತ್ನಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಯಮನೂರಪ್ಪ ಮಹಾಂತಪ್ಪ ನಾಯಕ (ಇದ್ಲಾಪುರ) ಎಂಬ ಯುವಕ ತಲ್ವಾರ್ ಬಳಸಿ ಕೇಕ್ ಕಟ್ ಮಾಡಿದ್ದಾನೆ ಎಂದು ಪಿಐ ವಿ.ನಾರಾಯಣ ತಿಳಿಸಿದ್ದಾರೆ.
ಕೇಕ್ ಕತ್ತರಿಸಿದ ವಿಡಿಯೊವನ್ನು ಯುವಕ ತನ್ನ ಮೊಬೈಲ್ನಲ್ಲಿ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದನ್ನು ಪೊಲೀಸ್ ಕಾನ್ಸ್ಟೆಬಲ್ ಚಂದ್ರಶೇಖರ ಎಂಬುವರು ಗುರುತಿಸಿ ತಮ್ಮ ಮೊಬೈಲ್ನಲ್ಲಿ ಉಳಿಸಿಕೊಂಡು ದೂರು ನೀಡಿದ್ದಾರೆ.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.