ADVERTISEMENT

ಬಿಸಿಯೂಟ : 25ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 19:30 IST
Last Updated 25 ಮಾರ್ಚ್ 2011, 19:30 IST
ಬಿಸಿಯೂಟ : 25ಮಕ್ಕಳು ಅಸ್ವಸ್ಥ
ಬಿಸಿಯೂಟ : 25ಮಕ್ಕಳು ಅಸ್ವಸ್ಥ   

ಮಳವಳ್ಳಿ: ಬಿಸಿಯೂಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಟ್ಟೆನೋವು, ವಾಂತಿ ಕಾಣಿಸಿಕೊಂಡು ಅಸ್ವಸ್ಥಗೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ತಾಲ್ಲೂಕಿನ ಮಿಕ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಊಟ ಸೇವಿಸಿದ ಸ್ವಲ್ಪ ಹೊತ್ತಿನ ನಂತರ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದ್ದು, ಇದರಿಂದ ಉಳಿದ ಮಕ್ಕಳು ಆತಂಕದಲ್ಲಿದ್ದರು. ಅಸ್ವಸ್ಥರಾದ ಮಕ್ಕಳನ್ನು ಸ್ಥಳೀಯ ಖಾಸಗಿ ನರ್ಸಿಂಗ್‌ಹೋಂನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ನಿರಂಜನ್, ರಕ್ಷಿತಾ, ಪ್ರದೀಪ್, ತನುಜಾ ಎಂಬ ವಿದ್ಯಾರ್ಥಿಗಳನ್ನು ಮಂಡ್ಯದ ಆಸ್ಪತ್ರೆಗೆ ಹಾಗೂ ಜಯಲಕ್ಷ್ಮಿ, ಸತೀಶ್, ಸೋನಾ, ಸಿದ್ದರಾಜು, ಅಮೃತ ಎಂಬುವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಸುದ್ದಿ ತಿಳಿದ ತಕ್ಷಣ ತುರ್ತುವಾಹನ 108ರಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶಿವಮಾದಪ್ಪ, ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಅರವಿಂದಪ್ಪ, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಗಣೇಶ್, ಡಾ.ಸಂಜಯ್,ಡಾ..ನಾಗರಾಜು , ಆಹಾರ ಪರಿವೀಕ್ಷಕ ಎಂ.ಕೆ.ವಿಶ್ವನಾಥ್ ಆಗಮಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.