ADVERTISEMENT

ರಸಗೊಬ್ಬರ ಬೆಲೆ ಇಳಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 6:15 IST
Last Updated 3 ಜುಲೈ 2012, 6:15 IST

ಮಂಡ್ಯ: ರಸಗೊಬ್ಬರದ ಬೆಲೆ ಇಳಿಸಬೇಕು ಎಂದ ಆಗ್ರಹಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ರಸಗೊಬ್ಬರಗಳ ಬೆಲೆಯನ್ನು ಎರಡ ರಿಂದ ಮೂರು ಪಟ್ಟು ಹೆಚ್ಚಿಸಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳೆ ನಷ್ಟ, ಉತ್ಪನ್ನಗಳಿಗೆ ಸೂಕ್ತ ದರ ಸಿಗದಿರುವುದರಿಂದ ರೈತ ಸಮುದಾಯ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದೆ. ಈಗ ರಸಗೊಬ್ಬರಗಳ ಬೆಲೆಯೂ ಹೆಚ್ಚುತ್ತಿರುವುದರಿಂದ, ಬೇಸಾಯ ಮಾಡುವುದೇ ದುಸ್ತರವಾಗಿದೆ ಎಂದರು.

2007-08ರಲ್ಲಿ ರೂ. 360 ಇದ್ದ `ಸುಫಲ~ ರಸಗೊಬ್ಬರದ ಬೆಲೆ ಈಗ ರೂ. 716 ಆಗಿದೆ. ಅಂತೆಯೇ 420 ರೂ. ಇದ್ದ `17:17:17~ ರಸಗೊಬ್ಬರದ ಬೆಲೆ 1021ರೂ. ಆಗಿದೆ. ಅದೇ ರೀತಿ, ಪೊಟ್ಯಾಷ್, ಯೂರಿಯಾ, ಡಿಎಪಿ, ರಾಕ್ ಫಾಸ್ಪೇಟ್ ಸೇರಿದಂತೆ ಇನ್ನಿತರೆ ರಸಗೊಬ್ಬರಗಳ ಬೆಲೆಯೂ ಹೆಚ್ಚಳವಾಗಿದೆ ಎಂದರು.ಸಕ್ಕರೆ, ಅಕ್ಕಿ ಬೆಲೆಯನ್ನು ಲೇವಿ ರೂಪದಲ್ಲಿ ನಿಯಂತ್ರಿಸುತ್ತಿರುವ ಕೇಂದ್ರ ಸರ್ಕಾರ, ರಸಗೊಬ್ಬರದ ದರ ಹೆಚ್ಚಳ ನಿಯಂತ್ರಿಸಲು ಸಾಧ್ಯವಾಗದಿರುವುದು ಏಕೆ ಎಂದು ಪ್ರಶ್ನಿಸಿದರು.

ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ನಾರಾಯಣರಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ ಮಹೇಶ್, ರೈತ ಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷ ಎಂ.ಸಂತೋಷ್, ಡಿ.ರಾಮಲಿಂಗಯ್ಯ, ಸ್ವರೂಪಚಂದ್, ಬಿಟಿ ಶ್ರೀನಿವಾಸಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.