ADVERTISEMENT

ಮಳವಳ್ಳಿ |ಸಾರಿಗೆ ಬಸ್‌ನಲ್ಲಿ ಸರ ಕಳವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:42 IST
Last Updated 30 ಜುಲೈ 2023, 14:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಳವಳ್ಳಿ: ಪಟ್ಟಣದಲ್ಲಿ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ನೂಕುನುಗ್ಗಲಿನಲ್ಲಿ ಪಂಡಿತಹಳ್ಳಿ ಗ್ರಾಮದ ವಿಜಯ್ ಕುಮಾರ್ ಪತ್ನಿ ಸೌಮ್ಯಾ ಅವರ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ.

ಪಟ್ಟಣಕ್ಕೆ ಬಂದಿದ್ದ ಅವರುಸ್ವಗ್ರಾಮಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ಹತ್ತುವ ವೇಳೆ ಸಾಕಷ್ಟು ನೂಕುನುಗ್ಗಲು ಉಂಟಾಗಿತ್ತು ಎನ್ನಲಾಗಿದೆ. ಬಸ್ ಹತ್ತಿದ ನಂತರ ಸರ ಕಳವಾಗಿರುವುದನ್ನು ಗಮನಿಸಿದ ಮಹಿಳೆ ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಹದಿನೈದು ದಿನಗಳಿಂದ ಪಟ್ಟಣದಲ್ಲಿ ಸಾರಿಗೆ ಬಸ್ ನಲ್ಲಿ ಪ್ರಯಾಣಿಕರ ಚಿನ್ನದ ಸರ ಕಳವಾಗಿರುವುದು ಇದು ಎರಡನೇ ಪ್ರಕರಣವಾಗಿದೆ.‌ ಕೆಲ ದಿನಗಳ ಹಿಂದೆ ಕುಂದೂರು ಗ್ರಾಮದ ಮಹಿಳೆಯ 50 ಗ್ರಾಂ. ತೂಕದ ಚಿನ್ನದ ಸರವನ್ನು ಬಸ್ ನಲ್ಲಿ ಕಳ್ಳರು ಎಗರಿಸಿದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.