ADVERTISEMENT

ಮಳವಳ್ಳಿ: ಶ್ರೀ ಕೃಷ್ಣ ಸಂಧಾನ ನಾಟಕದ ವೇಳೆ ಹೃದಯಾಘಾತ– ವೇದಿಕೆಯಲ್ಲೇ ಕಲಾವಿದ ಸಾವು

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 8:28 IST
Last Updated 8 ಜನವರಿ 2023, 8:28 IST
ಕಲಾವಿದ ಡಿ.ಎನ್.ನಂಜಯ್ಯ
ಕಲಾವಿದ ಡಿ.ಎನ್.ನಂಜಯ್ಯ   

ಮಳವಳ್ಳಿ: ನಾಟಕ ಪ್ರದರ್ಶನ ನೀಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಕಲಾವಿದರೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಬಂಡೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮದ ಡಿ.ಎನ್.ನಂಜಯ್ಯ (41) ಮೃತಪಟ್ಟವರು. ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಅವರು ಪ್ರದರ್ಶನ ನೀಡುತ್ತಿದ್ದರು.

ಬಂಡೂರು ಗ್ರಾಮದ ಬಸವನಗುಡಿಯಲ್ಲಿ ಶನಿವಾರ ‘ಶ್ರೀ ಕೃಷ್ಣ ಸಂಧಾನ’ ನಾಟಕದಲ್ಲಿ ನಂಜಯ್ಯ ಸೇರಿದಂತೆ ಸುಮಾರು 20 ಕಲಾವಿದರು ನಾಟಕ ಪ್ರದರ್ಶಿಸುತ್ತಿದ್ದರು. ನಾಟಕದಲ್ಲಿ ಸಾತ್ಯಕಿ, ಸೈಂಧವ ಪಾತ್ರ ಅಭಿನಯಿಸುತ್ತಿದ್ದಾಗಲೇ ಅವರು ಕುಸಿದು ಬಿದ್ದಿದ್ದಾರೆ.

ADVERTISEMENT

ತಕ್ಷಣವೇ ಕಲಾವಿದರು ಹಾಗೂ ಗ್ರಾಮಸ್ಥರು ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.